ಕಪಿಲ್ ನೇತೃತ್ವದ ಸಮಿತಿಯಿಂದಾಗಿ ರವಿಶಾಸ್ತ್ರಿ ಕೋಚ್ ಹುದ್ದೆಗೇ ಕುತ್ತು!

ಸೋಮವಾರ, 30 ಸೆಪ್ಟಂಬರ್ 2019 (09:11 IST)
ಮುಂಬೈ: ಲೋಧಾ ಕಮಿಟಿ ಶಿಫಾರಸ್ಸಿನ ಅನ್ವಯ ಬಿಸಿಸಿಐನ ಯಾವುದೇ ಹುದ್ದೆಯಲ್ಲಿರುವವರು ಬೇರೆ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಇದು ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷಕ್ಕೆಡೆ ಮಾಡುತ್ತದೆ.


ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್ ಸೇರಿದಂತೆ ಕ್ರಿಕೆಟ್ ನ ಘಟಾನುಘಟಿ ದಿಗ್ಗಜರೆಲ್ಲಾ ಈ ವಿಚಾರದಲ್ಲಿ ಬಿಸಿಸಿಐ ತನಿಖಾಧಿಕಾರಿಗಳಿಂದ ನೋಟಿಸ್ ಪಡೆದವರೇ. ಆದರೆ ಈಗ ಟೀಂ ಇಂಡಿಯಾ ಕೋಚ್ ಆಯ್ಕೆ ಮಾಡಿದ ಕಪಿಲ್ ದೇವ್ ನೇತೃತ್ವದ ಸಿಎಸಿ ಸಮಿತಿಯ ವಿರುದ್ಧವೇ ಸ್ವ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿದೆ.

ಈ ಬಗ್ಗೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ಕಪಿಲ್ ನೇತೃತ್ವದ ಮೂವರು ಸಮಿತಿ ಸದಸ್ಯರ ಮೇಲೆ ಬಿಸಿಸಿಐ ತನಿಖಾಧಿಕಾರಿ ಡಿಕೆ ಜೈನ್ ಗೆ ದೂರು ನೀಡಿದ್ದಾರೆ. ಹೀಗಾಗಿ ಈಗ ಡಿಕೆ ಜೈನ್ ಈ ಸಮಿತಿ ಸದಸ್ಯರ ವಿರುದ್ಧ ತನಿಖೆ ನಡೆಸಲಿದ್ದು, ಒಂದು ವೇಳೆ ಆರೋಪ ಸಾಬೀತಾದರೆ, ಇವರು ಕೋಚ್ ಆಗಿ ಆಯ್ಕೆ ಮಾಡಿದ ರವಿಶಾಸ್ತ್ರಿ ಸ್ಥಾನಕ್ಕೆ ಕುತ್ತು ಬರಲಿದೆ. ರವಿಶಾಸ್ತ್ರಿ ಮತ್ತೊಮ್ಮೆ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಬೇಕಾಗುತ್ತದೆ. ಈ ಪ್ರಕರಣ ಸಾಬೀತಾದರೆ ಬಿಸಿಸಿಐ ಮುಜುಗರಕ್ಕೀಡಾಗುವುದು ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ