ಭಾನುವಾರದ ಪಂದ್ಯಕ್ಕೆ ಗುವಾಹಟಿಗೆ ಬರಲು ಹಿಂದೇಟು ಹಾಕುತ್ತಿರುವ ಟೀಂ ಇಂಡಿಯಾ

ಶುಕ್ರವಾರ, 3 ಜನವರಿ 2020 (09:40 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಭಾನುವಾರದಿಂದ ಆರಂಭವಾಗಲಿದ್ದು, ಗುವಾಹಟಿಯ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ.


ಈ ಪಂದ್ಯಕ್ಕೆ ತಯಾರಾಗಲು ಶ್ರೀಲಂಕಾ ಈಗಾಗಲೇ ಬಂದಿಳಿದಿದೆ. ಆದರೆ ಟೀಂ ಇಂಡಿಯಾ ಮಾತ್ರ ಇನ್ನೂ ಇಲ್ಲಿಗೆ ಬಂದಿಳಿದಿಲ್ಲ. ಇದಕ್ಕೆ ಕಾರಣ ಇಲ್ಲಿ ನಡೆಯುತ್ತಿರುವ ಪೌರತ್ವ ಖಾಯಿದೆ ವಿರೋಧಿ ಪ್ರತಿಭಟನೆ.

ಪ್ರತಿಭಟನೆಯಿಂದಾಗಿ ಉದ್ವಿಗ್ನ ಸ್ಥಿತಿಯಲ್ಲಿದ್ದ ಗುವಾಹಟಿ ಈಗ ಶಾಂತವಾಗಿದೆ. ಹಾಗಿದ್ದರೂ ಇದುವರೆಗೆ ಟೀಂ ಇಂಡಿಯಾ ಇಲ್ಲಿಗೆ ಬಂದಿಲ್ಲ. ಇಂದು ಅಥವಾ ನಾಳೆ ಇಲ್ಲಿಗೆ ಬಂದಿಳಿಯುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ