ಮನೀಶ್ ಪಾಂಡೆಯನ್ನು ಡ್ರಾಪ್ ಮಾಡಿದ್ದಕ್ಕೇ ಟೀಂ ಇಂಡಿಯಾ ಸೋತಿತಾ?!

ಭಾನುವಾರ, 9 ಫೆಬ್ರವರಿ 2020 (09:32 IST)
ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲಿಗೆ ಟೀಂ ಇಂಡಿಯಾ ಮನೀಶ್ ಪಾಂಡೆಯನ್ನು ಕೈ ಬಿಟ್ಟಿದ್ದೇ ಕಾರಣವಾಯಿತಾ? ಸರಣಿ ಸೋಲಿನ ಬಳಿಕ ಅಭಿಮಾನಿಗಳು ಇದೇ ಕಾರಣಕ್ಕೆ ಮನೀಶ್ ಪಾಂಡೆ ಕೈ ಬಿಟ್ಟಿದ್ದೇ ಕಾರಣ ಎಂದು ದೂಷಿಸಿದ್ದಾರೆ.


ಮನೀಶ್ ಪಾಂಡೆ ಟಿ20 ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಹಾಗಿದ್ದರೂ ಏಕದಿನ ಸರಣಿಯಲ್ಲಿ ಅವರನ್ನು ಆಡಿಸದೇ ಕೇದಾರ್ ಜಾಧವ್ ಗೆ ಅವಕಾಶ ನೀಡಲಾಯಿತು. ಕೊಹ್ಲಿಯ ಈ ನಿರ್ಧಾರ ಈಗ ಅಭಿಮಾನಿಗಳ ಟೀಕೆಗೊಳಗಾಗಿದೆ.

ಪಾಂಡೆ ಇದ್ದಿದ್ದರೆ ಒಬ್ಬ ಉತ್ತಮ ಫಿನಿಶರ್ ಸಿಗುತ್ತಿದ್ದರು. ಆದರೆ ಜಾಧವ್ ರನ್ನು ಆಡಿಸಿ ಭಾರತಕ್ಕೆ ಯಾವ ಉಪಯೋಗವೂ ಆಗಲಿಲ್ಲ ಎಂದು ನೆಟ್ಟಿಗರು ಕೊಹ್ಲಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ