ಧೋನಿಯನ್ನು ಬ್ಯಾನ್ ಮಾಡಬೇಕಿತ್ತು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದೇಕೆ ಗೊತ್ತಾ?

ಸೋಮವಾರ, 15 ಏಪ್ರಿಲ್ 2019 (07:55 IST)
ನವದೆಹಲಿ: ಐಪಿಎಲ್ ಪಂದ್ಯದಲ್ಲಿ ನೋ ಬಾಲ್ ಪ್ರಮಾದವೆಸಗಿದ ಅಂಪಾಯರ್ ವಿರುದ್ಧ ಮೈದಾನಕ್ಕಿಳಿದು ಕೂಗಾಡಿದ ಸಿಎಸ್ ಕೆ ನಾಯಕ ಧೋನಿಗೆ ನಿಷೇಧ ಶಿಕ್ಷೆ ವಿಧಿಸಬೇಕಿತ್ತು ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.


ಧೋನಿಗೆ ಈ ತಪ್ಪಿಗೆ ಮ್ಯಾಚ್ ರೆಫರಿ ಶೇ.50 ರಷ್ಟು ಸಂಭಾವನೆ ದಂಡ ವಿಧಿಸಿದ್ದರು. ಆದರೆ ಈ ಶಿಕ್ಷೆ ಕಡಿಮೆಯಾಯಿತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಅಂಪಾಯರ್ ನಿರ್ಧಾರ ಪ್ರಶ್ನಿಸಿ ಮೈದಾನಕ್ಕೆ ನುಗ್ಗುವುದು ಮತ್ತು ಕೂಗಾಡುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಹೀಗೆ ಮಾಡಿದರೆ ಅಂಪಾಯರ್ ಗಳ ಮರ್ಯಾದೆ ಗತಿ ಏನು? ಟೀಂ ಇಂಡಿಯಾ ನಾಯಕರಾಗಿದ್ದಾಗ ಧೋನಿ ಯಾವತ್ತೂ ಹೀಗೆ ವರ್ತಿಸಿರಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ