ಯುವರಾಜ್ ಸಿಂಗ್ ವಿರುದ್ಧ ಕೇಸ್: ಬಹಿರಂಗ ಕ್ಷಮೆ ಯಾಚಿಸಿದ ಕ್ರಿಕೆಟಿಗ

ಶನಿವಾರ, 6 ಜೂನ್ 2020 (09:15 IST)
ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಇನ್ ಸ್ಟಾಗ್ರಾಂ ಲೈವ್ ಚ್ಯಾಟ್ ವೇಳೆ ಬಳಸಿದ ಪದವೊಂದು ವಿವಾದಕ್ಕೆ ಕಾರಣವಾಗಿದೆ. ಅದರ ವಿರುದ್ಧ ಪ್ರಕರಣವೂ ದಾಖಲಾಗಿದೆ. ಇದರ ಬೆನ್ನಲ್ಲೇ ಯುವಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.


ರೋಹಿತ್ ಶರ್ಮಾ ಜತೆ ಚ್ಯಾಟ್ ಮಾಡುವ ಯಜುವೇಂದ್ರ ಚಾಹಲ್ ಬಗ್ಗೆ ತಮಾಷೆಯಾಗಿ ಯುವರಾಜ್ ಸಿಂಗ್ ಜನಾಂಗೀಯ ಪದವೊಂದನ್ನು ಬಳಸಿದ್ದರು. ಇದರ ವಿರುದ್ಧ ದಲಿತ ಪರ ಹೋರಾಟಗಾರರು ದೂರು ದಾಖಲಿಸಿದ್ದರು.

ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೇ ಕ್ರಿಕೆಟಿಗ ಯುವರಾಜ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆ ಯಾಚಿಸಿದ್ದು, ನಾನು ಎಲ್ಲಾ ಜಾತಿ, ಮತ, ನಂಬಿಕೆಗಳನ್ನು ಗೌರವಿಸುತ್ತೇನೆ. ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ