ನಾನು ಸತ್ತರೂ ಸರಿಯೇ ಭಾರತ ವಿಶ್ವಕಪ್ ಗೆಲ್ಲಲಿ ಎಂದಿದ್ದ ಯುವರಾಜ್ ಸಿಂಗ್

ಶನಿವಾರ, 21 ಮಾರ್ಚ್ 2020 (09:20 IST)
ಮುಂಬೈ: 2011 ರ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಯುವರಾಜ್ ಸಿಂಗ್ ಟೂರ್ನಿಯ ನಡುವೇ ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಷಯವನ್ನು ಮುಚ್ಚಿಟ್ಟು ತಂಡಕ್ಕಾಗಿ ಶ್ರಮಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.


ಗ್ರೂಪ್ ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿ ಸಂಕಷ್ಟದಲ್ಲಿತ್ತು. ಈ ವೇಳೆ ಯುವಿ ಶತಕ ಸಿಡಿಸಿ ಭಾರತವನ್ನು ಗೆಲುವಿನ ಕಡೆಗೆ ಕೊಂಡೊಯ್ದಿದ್ದರು.

ಆ ದಿನ ಯುವಿಗೆ ಆಡುವಾಗ ಮೈದಾನದಲ್ಲೇ ಸುಸ್ತಾದಂತೆ ಅನಿಸಿತ್ತು, ಅಲ್ಲದೆ, ಎರಡು ಬಾರಿ ವಾಂತಿ ಕೂಡಾ ಮಾಡಿಕೊಡರಂತೆ. ಆರಂಭದಲ್ಲಿ ಇದು ಚೆನ್ನೈನ ಉಷ್ಣತೆಯಿಂದ ಹೀಗಾಗಿರಬೇಕು ಎಂದುಕೊಂಡಿದ್ದರಂತೆ. ಆದರೆ ಬಳಿಕ ಕಣ್ಣುಗಳೂ ಮಂಜಾದಂತೆ ಅನಿಸತೊಡಗಿದವಂತೆ. ಆ ಸಂದರ್ಭಲ್ಲಿ ಯುವಿಗೆ ಇದ್ದಿದ್ದು ಒಂದೇ ಚಿಂತೆ. ನಾನು ಇದರ ಬಳಿಕ ಸತ್ತರೂ ಸರಿಯೇ. ಭಾರತ ವಿಶ್ವಕಪ್ ಗೆಲ್ಲಲಿ ಎಂದು ಮಾತ್ರವಾಗಿತ್ತಂತೆ. ಹೀಗಂತ ಯುವಿ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ