‘ಸುರೇಶ್ ರೈನಾ, ಯುವರಾಜ್ ಸಿಂಗ್ ವೃತ್ತಿ ಬದುಕು ಮೊಟಕುಗೊಳ್ಳಲು ಕೊಹ್ಲಿಯೇ ಕಾರಣ’

ಸೋಮವಾರ, 16 ಅಕ್ಟೋಬರ್ 2017 (08:37 IST)
ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರ ವೃತ್ತಿ ಬದುಕು ಮೊಟಕುಗೊಳಿಸಿದ್ದು ನಾಯಕ ವಿರಾಟ್ ಕೊಹ್ಲಿ ಎಂದು ಚಿತ್ರ ನಿರ್ಮಾಪಕ ಕೆಆರ್ ಕೆ ದೂರಿದ್ದಾರೆ.

 
ಕಳೆದೆರಡು ಸರಣಿಗೆ ಯುವರಾಜ್ ಸಿಂಗ್ ರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸುರೇಶ್ ರೈನಾ ಧೋನಿ ನಾಯಕತ್ವ ತ್ಯಜಿಸಿದ ಮೇಲೆ ಟೀಂ ಇಂಡಿಯಾಕ್ಕೆ ಬಂದಿದ್ದೇ ಇಲ್ಲ. ಇದೀಗ ಕೆಎಲ್ ರಾಹುಲ್ ಕೂಡಾ ವಿನಾಕಾರಣ ಮೂಲೆಗುಂಪಾಗಿದ್ದಾರೆ.

ಇವರನ್ನೆಲ್ಲಾ ಪರ್ಮನೆಂಟಾಗಿ ಮನೆಗೆ ಕಳುಹಿಸಿದ್ದು ಕೊಹ್ಲಿ ಎಂದು ವಿವಾದಿತ ನಿರ್ದೇಶಕ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಕೊಹ್ಲಿ ಅಭಿಮಾನಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ