ಜಿಂಬಾಬ್ವೆಯಲ್ಲಿರುವ ಕೆಎಲ್ ರಾಹುಲ್ ಪಡೆಗೆ ಬೇಗ ಸ್ನಾನ ಮುಗಿಸಲು ಸೂಚನೆ ನೀಡಿದ ಬಿಸಿಸಿಐ!

ಮಂಗಳವಾರ, 16 ಆಗಸ್ಟ್ 2022 (16:38 IST)
ಹರಾರೆ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾಗೆ ಬೇಗ ಸ್ನಾನ ಮುಗಿಸಲು ಬಿಸಿಸಿಐ ಸೂಚನೆ ನೀಡಿದೆ! ಇದಕ್ಕೆ ಕಾರಣವೂ ಇದೆ.

ಜಿಂಬಾಬ್ವೆ ರಾಷ್ಟ್ರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ ಅನಗತ್ಯವಾಗಿ ನೀರು ವ್ಯಯಿಸುವ ಹಾಗಿಲ್ಲ. ಈ ಕಾರಣಕ್ಕೆ ಕ್ರಿಕೆಟಿಗರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಜಾ ಮಾಡುವ ಯೋಗವೂ ಇಲ್ಲ.

ಆ ದೇಶದ ನೀರಿನ ಸಮಸ್ಯೆಯನ್ನು ಅರಿತು ಬೇಗನೇ ಸ್ನಾನ ಮುಗಿಸುವಂತೆ ಕ್ರಿಕೆಟಿಗರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಸ್ವಿಮ್ಮಿಂಗ್ ಪೂಲ್ ಸೆಷನ್ ನ್ನು ಬಿಸಿಸಿಐ ರದ್ದುಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ