ವಿರಾಟ್ ಕೊಹ್ಲಿ ಕೈಬಿಡದಂತೆ ಕಾಪಾಡಿದ್ದ ಧೋನಿ: ಮಂಜ್ರೇಕರ್ ಬಿಚ್ಚಿಟ್ಟ ಸತ್ಯ

ಮಂಗಳವಾರ, 15 ಡಿಸೆಂಬರ್ 2020 (11:06 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧೋನಿಯನ್ನು ಯಾಕೆ ಅಷ್ಟೊಂದು ಗೌರವಿಸುತ್ತಾರೆ ಗೊತ್ತಾ? ಯಾಕೆಂದರೆ ಧೋನಿ ಯಾವತ್ತೂ ಅವರಿಗೆ ಬೆಂಬಲವಾಗಿದ್ದರು. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ ಕೂಡಾ. ಈಗ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಕೂಡಾ ಅದನ್ನೇ ಹೇಳಿದ್ದಾರೆ.


2011-12 ನೇ ಸಾಲಿನಲ್ಲಿ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾಗ ಆಯ್ಕೆಗಾರರು ಅವರನ್ನು ಕೈ ಬಿಡಲು ತೀರ್ಮಾನಿಸಿದ್ದರಂತೆ. ಆದರೆ ಆಗ ಕೊಹ್ಲಿಯನ್ನು ಕೈಬಿಡದಂತೆ ಧೋನಿ ಕಾಪಾಡಿದ್ದರು ಎಂದು ಮಂಜ್ರೇಕರ್ ಹೇಳಿದ್ದಾರೆ. ಕೇವಲ ಕೊಹ್ಲಿ ಮಾತ್ರವಲ್ಲ, ಪ್ರಸಕ್ತ ಟೀಂ ಇಂಡಿಯಾದಲ್ಲಿರುವ ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ, ಇಶಾಂತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಹಲವು ಕ್ರಿಕೆಟಿಗರ ವೃತ್ತಿ ಜೀವನವನ್ನು ಕಾಪಾಡಿದ್ದು ಧೋನಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ