ಧೋನಿ ತಂಗಿದ್ದ ಹೋಟೆಲ್ ಗೆ ಬೆಂಕಿ!

ಶುಕ್ರವಾರ, 17 ಮಾರ್ಚ್ 2017 (10:04 IST)
ರಾಂಚಿ: ವಿಜಯ್ ಹಜಾರೆ ಟ್ರೋಫಿ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಂಗಿದ್ದ ದೆಹಲಿಯ ಖಾಸಗಿ ಹೋಟೆಲ್ ಗೆ ಬೆಂಕಿ ತಗಲಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

 

ಇದರಿಂದಾಗಿ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ಮುಂದೂಡಿಕೆಯಾಗಿದೆ. ಜಾರ್ಖಂಡ್ ತಂಡದ ಪರ ಆಡುತ್ತಿರುವ ಧೋನಿ, ಸಹ ಆಟಗಾರರೊಂದಿಗೆ ಹೋಟೆಲ್ ನಲ್ಲಿ ತಂಗಿದ್ದರು.

 
 ಬೆಂಗಾಲ್ ಮತ್ತು ಜಾರ್ಖಂಡ್ ತಂಡದ ನಡುವೆ ಸೆಮಿಫೈನಲ್ ಪಂದ್ಯ ನಡೆಯಬೇಕಿತ್ತು. ಇದಕ್ಕಾಗಿ ಧೋನಿ ದೆಹಲಿಯ ದ್ವಾರಕಾ ಹೋಟೆಲ್ ನಲ್ಲಿ ತಂಗಿದ್ದರು. ಉಭಯ ತಂಡಗಳೂ ಇದೇ ಹೋಟೆಲ್ ನಲ್ಲಿ ತಂಗಿದ್ದರು. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಹೋಟೆಲ್ ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಆಟಗಾರರನ್ನು ಅಲ್ಲಿಂದ ಬೇರೆ ಹೋಟೆಲ್ ಗೆ ಸ್ಥಳಾಂತರಿಸಲಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ