ಮಾಜಿ ಆಟಗಾರರ ಪರ ರಾಹುಲ್ ದ್ರಾವಿಡ್ ಬ್ಯಾಟಿಂಗ್

ಗುರುವಾರ, 13 ಆಗಸ್ಟ್ 2020 (12:24 IST)
ಮುಂಬೈ: ಹಿರಿಯ, ಮಾಜಿ ಆಟಗಾರರ ಪರವಾಗಿ ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ಹಿರಿಯ ಆಟಗಾರರನ್ನು ಕಡೆಗಣಿಸಬೇಡಿ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ.


ಬಿಸಿಸಿಐ ಆಯೋಜಿಸಿದ ಆನ್ ಲೈನ್ ಸೆಮಿನಾರ್ ನಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನುದ್ದೇಶಿಸಿ ಮಾತನಾಡಿರುವ ದ್ರಾವಿಡ್ ಹಿರಿಯ, ಮಾಜಿ ಆಟಗಾರರ ಅನುಭವವನ್ನು ವೇಸ್ಟ್ ಆಗಲು ಬಿಡಬೇಡಿ, ಅವರನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಯೂನಿಟ್ ಗಳು ಈ ಹಿರಿಯ ಆಟಗಾರರನ್ನು ಬಳಸಿ ಯುವ ಆಟಗಾರರಿಗೆ ಮಾರ್ಗದರ್ಶನ ಕೊಡುವ ಕೆಲಸ ಮಾಡಬೇಕು ಎಂದು ದ್ರಾವಿಡ್ ಸೆಮಿನಾರ್ ನಲ್ಲಿ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ