ರಾಷ್ಟ್ರೀಯ ತಂಡಕ್ಕೆ ಮರಳಲು ಕೆಎಲ್ ರಾಹುಲ್, ರಿಷಬ್ ಪಂತ್ ಗೆ ಇದೇ ಚಾನ್ಸ್

ಗುರುವಾರ, 26 ಸೆಪ್ಟಂಬರ್ 2019 (09:16 IST)
ಮುಂಬೈ: ಫಾರ್ಮ್ ಕಳೆದುಕೊಂಡು ಟೀಕೆಗೊಳಗಾಗುತ್ತಿರುವ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಗೆ ಈಗ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳಲು ಉತ್ತಮ  ಅವಕಾಶ ಸಿಕ್ಕಿದೆ.


ವಿಜಯ್ ಹಜಾರೆ ಏಕದಿನ ಟ್ರೋಫಿ ಆರಂಭವಾಗಿದ್ದು, ಇಬ್ಬರೂ ಆಟಗಾರರು ತಮ್ಮ ತವರು ತಂಡದ ಪರ ಆಡುತ್ತಿದ್ದಾರೆ. ರಾಹುಲ್ ಕರ್ನಾಟಕ ತಂಡದ ಉಪನಾಯಕನಾದರೆ,  ರಿಷಬ್ ಪಂತ್ ದೆಹಲಿ ತಂಡದ ಪರ ಆಡುತ್ತಿದ್ದಾರೆ.

ಇಬ್ಬರೂ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮರಳಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಇದು ತಮ್ಮನ್ನು ಸುಧಾರಿಸಿಕೊಳ್ಳಲು ಕೊನೆಯ ಅವಕಾಶವಾಗಿರಲಿದೆ. ಅದನ್ನು ಅವರು ಬಳಸಿಕೊಳ್ಳುವುದು ಮುಖ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ