ಕೊರೋನಾ ರೋಗಿಗಳಿಗೆ ಉಚಿತ ಆಹಾರ ಒದಗಿಸಲಿರುವ ಕ್ರಿಕೆಟಿಗ ಸೆಹ್ವಾಗ್

ಮಂಗಳವಾರ, 27 ಏಪ್ರಿಲ್ 2021 (10:50 IST)
ನವದೆಹಲಿ: ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕಳೆದ ಬಾರಿಯೂ ಲಾಕ್ ಡೌನ್ ಸಮಯದಲ್ಲಿ ತಮ್ಮ ಕೈಯಾರೆ ಅಡುಗೆ ಮಾಡಿ ಸಂತ್ರಸ್ತರಿಗೆ ವಿತರಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದರು.


ಈ ಬಾರಿ ಮತ್ತೆ ದೆಹಲಿಯಲ್ಲಿ ಲಾಕ್ ಡೌನ್ ವೇಳೆ ಕೊರೋನಾದಿಂದ ಸಂತ್ರಸ್ತರಾದವರ ನೆರವಿಗೆ ಧಾವಿಸಿದ್ದಾರೆ. ತಮ್ಮ ಸೆಹ್ವಾಗ್ ಫೌಂಡೇಷನ್ ಮೂಲಕ ಅಗತ್ಯವಿರುವ ದೆಹಲಿಯ ಕೊರೋನಾ ರೋಗಿಗಳಿಗೆ ಮತ್ತು ಇತರ ಸಂತ್ರಸ್ತರಿಗೆ ಮನೆ ಅಡುಗೆ ಮಾಡಿ ವಿತರಿಸಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲದೆ, ಆಕ್ಸಿಜನ್ ಪೂರೈಕೆ ವಿಚಾರವಾಗಿಯೂ ತಮ್ಮ ಫೌಂಡೇಷನ್ ಕೆಲಸ ಮಾಡಲಿರುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ. ಈ ಮೂಲಕ ಸೆಹ್ವಾಗ್ ಮಾಡುತ್ತಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ