ಭಾರತ-ಪಾಕ್ ನಡುವೆ ಅಂತರ ಹೆಚ್ಚಾಯ್ತು ಎಂದ ಶಾಹಿದ್ ಅಫ್ರಿದಿ

ಸೋಮವಾರ, 5 ಜೂನ್ 2017 (11:51 IST)
ಕರಾಚಿ: ಭಾರತದ ವಿರುದ್ಧ ನಿನ್ನೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೋತ ನಂತರ ಪಾಕಿಸ್ತಾನ ತಂಡಕ್ಕೆ ಎಲ್ಲೆಡೆಯಿಂದ ಟೀಕೆಗಳ ಸುರಿಮಳೆಯಾಗುತ್ತಿದೆ. ಇದೀಗ ಈ ಸೋಲಿನ ನಂತರ ನಮ್ಮ ನಡುವಿನ ಅಂತರ ಹೆಚ್ಚಾಯ್ತು ಎಂದು ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ.

 
ಪಾಕ್ ಸೋಲಿನ ನಂತರ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಶಾಹಿದ್ ಅಫ್ರಿದಿ ‘ಈ ಸೋಲಿನ ನಂತರ ನಮ್ಮೆರಡೂ ತಂಡಗಳ ನಡುವಿನ ಸಾಮರ್ಥ್ಯದ ಅಂತರ ಹೆಚ್ಚಾಯ್ತು. ಭಾರತ ದಿನ ಕಳೆದ ಹಾಗೆ ಪರಿಪೂರ್ಣವಾಗುತ್ತಾ ಹೋಯಿತು. ಆದರೆ ಪಾಕ್ ತಂಡ ಅಧೋಗತಿಗಿಳಿಯಿತು.

ಇದೀಗ ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಡೆತ್ ಓವರ್ ನಲ್ಲಿ ಸರಿಯಾಗಿ ಬೌಲಿಂಗ್ ಮಾಡದೇ, ಸ್ಟ್ರೈಕ್ ರೊಟೇಷನ್ ಮಾಡದೇ ಸೋತೆವು’ ಎಂದು ಅಫ್ರಿದಿ ವಿಮರ್ಶಿಸಿದ್ದಾರೆ. ಅಫ್ರಿದಿ ಮಾತ್ರವಲ್ಲ ಮಾಜಿ ನಾಯಕ ಇಮ್ರಾನ್ ಖಾನ್ ಕೂಡಾ ಪಾಕ್ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ