ಪೌರತ್ವ ಖಾಯಿದೆ ವಿವಾದದ ಬೆನ್ನಲ್ಲೇ ಪಾಕ್ ವೇಗಿ ಶೊಯೇಬ್ ಅಖ್ತರ್ ನೀಡಿದ ಅಚ್ಚರಿಯ ಹೇಳಿಕೆ
‘ದನೇಶ್ ಉತ್ತಮ ಆಟಗಾರನಾಗಿದ್ದರೂ ಹಿಂದೂ ಎನ್ನುವ ಕಾರಣಕ್ಕೆ ಅವಗಣನೆಗೆ ಗುರಿಯಾಗುತ್ತಿದ್ದರು. ಹಿಂದೂ ಆಗಿದ್ದುಕೊಂಡು ಈತ ಇಲ್ಲಿ ಯಾಕೆ ಉಣ್ಣುತ್ತಿದ್ದಾನೆ’ ಎಂದು ಕನೇರಿಯಾರನ್ನು ಅವಮಾನಿಸಲಾಗುತ್ತಿತ್ತು ಎಂದು ಶೊಯೇಬ್ ಹೇಳಿರುವುದು ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ.