ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ತಂಡಕ್ಕೆ ನೀಡಿದ ಆಹಾರವೇನೆಂದು ಶೊಯೇಬ್ ಅಖ್ತರ್ ಗೆ ತನಿಖೆ ಮಾಡಬೇಕಂತೆ!

ಸೋಮವಾರ, 23 ಜನವರಿ 2017 (10:29 IST)
ಸಿಡ್ನಿ: ಒಂದು ತಂಡ ಸೋತರೆ ಎಲ್ಲರೂ ಕ್ರಿಕೆಟ್ ಗೆ ಸಂಬಂಧಿಸಿದಂತೆ ಏನೇನೋ ಕಾರಣ ಹುಡುಕುತ್ತಾರೆ. ಆದರೆ ಮಾಜಿ ವೇಗಿ ಶೊಯೇಬ್ ಅಖ್ತರ್ ಮಾತ್ರ ತಮ್ಮ ತಂಡ ಆಸ್ಟ್ರೇಲಿಯಾದಲ್ಲಿಆಡಿದ ರೀತಿ ನೋಡಿ ಇದಕ್ಕೆಲ್ಲಾ ಅವರ ಆಹಾರವೇ ಕಾರಣ ಎಂದಿದ್ದಾರೆ. ಇದ್ಯಾವುದಪ್ಪಾ ಹೊಸತು ಎಂದುಕೊಂಡಿರಾ?
 

ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯವನ್ನು ಪಾಕಿಸ್ತಾನ ಹೀನಾಯವಾಗಿ  ಸೋತಿತು. ಈ ಪಂದ್ಯದಲ್ಲಿ ಪಾಕ್ ಆಟಗಾರರ ಫೀಲ್ಡಿಂಗ್ ಗಲ್ಲಿ ಕ್ರಿಕೆಟಿಗರಿಗಿಂತ ಹೀನಾಯವಾಗಿತ್ತು. ಹಲವು ಸುಲಭ ಕ್ಯಾಚ್ ಗಳು ನೆಲ ಸೇರಿದ್ದರೆ, ಆಟಗಾರರು ಬಾಲ್ ಬೌಂಡರಿ ಗೆರೆಯತ್ತ ಸಾಗುವುದನ್ನು ನೋಡುತ್ತಾ ನಿಂತುಬಿಟ್ಟರು. ಇದೀಗ ಪಾಕ್ ಮಾಜಿ ವೇಗಿಯ ಕೆಂಗಣ್ಣಿಗೆ ಗುರಿಯಾಗಿದೆ.

ಹೀಗಾಗಿ ಮೊದಲು ಲಂಚ್ ಟೈಮ್ ನಲ್ಲಿ ಪಾಕ್ ಆಟಗಾರರು ಏನು ತಿಂದಿದ್ದಾರೆಂಬುದನ್ನು ತನಿಖೆ ಮಾಡಬೇಕು. ಎಣ್ಣೆ ಪದಾರ್ಥ ತಿಂದರಾ? ಬೆಣ್ಣೆ ತಿಂದರಾ? ಯಾಕೆ ಹೀಗೆ ಆಡಿದರು ಎಂದು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಅಖ್ತರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಆಗ್ರಹಿಸಿದ್ದಾರೆ.  ಸೋತು ಸುಣ್ಣವಾಗಿರುವ ತಂಡಕ್ಕೆ ಆಯ್ಕೆಗಾರರ ಮುಖ್ಯಸ್ಥ ಆಟಗಾರರ ಸುಸ್ತು ಇದಕ್ಕೆಲ್ಲಾ ಕಾರಣ ಎನ್ನುತ್ತಿದ್ದರೆ, ಅಖ್ತರ್ ಆಹಾರವೇ ಕಾರಣ ಎನ್ನುತ್ತಿದ್ದಾರೆ, ಆದರೆ ಆಟ ಸುಧಾರಿಸಲು ದಾರಿಯೇನೆಂದು ಯಾರೂ ಹೇಳುತ್ತಿಲ್ಲ ಪಾಪ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ