ಹೃದಯಾಘಾತಕ್ಕೊಳಗಾದ ತಪ್ಪಿಗೆ ಗಂಗೂಲಿ ಜಾಹೀರಾತಿನಿಂದ ಔಟ್!

ಬುಧವಾರ, 6 ಜನವರಿ 2021 (10:23 IST)
ಕೋಲ್ಕೊತ್ತಾ: ಲಘು ಹೃದಯಾಘಾತಕ್ಕೊಳಗಾದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಅಡುಗೆ ಎಣ್ಣೆ ಉತ್ಪನ್ನದ ಕಂಪನಿ ಅದಾನಿ ವಿಲ್ಮಾರ್ ತನ್ನ ಜಾಹೀರಾತಿನಿಂದಲೇ ಹೊರಹಾಕಿದೆ.


ಗಂಗೂಲಿ ಈ ಜಾಹೀರಾತಿನಲ್ಲಿ ಈ ಅಡುಗೆ ಎಣ್ಣೆ ಹೃದಯದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಆದರೆ ಸ್ವತಃ ಗಂಗೂಲಿಯೇ ಈಗ ಹೃದಯಾಘಾತಕ್ಕೊಳಗಾಗಿರುವುದರಿಂದ ಅವರನ್ನು ತಾತ್ಕಾಲಿಕವಾಗಿ ಜಾಹೀರಾತಿನಿಂದ ಕೈ ಬಿಡಲಾಗಿದೆ. ಗಂಗೂಲಿಗೆ ಹೃದಯಾಘಾತಕ್ಕೊಳಗಾದ ಬಳಿಕ ಫಾರ್ಚೂನ್ ಅಡುಗೆ ಎಣ್ಣೆಯ ಗಂಗೂಲಿ ಜಾಹೀರಾತು ಭಾರೀ ಟ್ರೋಲ್ ಗೊಳಗಾಗಿತ್ತು. ಇದು ತನ್ನ ಕಂಪನಿ ಉತ್ಪನ್ನಕ್ಕೆ ಹೊಡೆತ ಬೀಳುತ್ತದೆ ಎಂದು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ