ಕೇದಾರ್ ಜಾದವ್ ಗೆ ತಕ್ಕ ಬಿರುದು ಕೊಟ್ಟ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್

ಸೋಮವಾರ, 23 ಜನವರಿ 2017 (12:54 IST)
ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಈಗ ಕೇದಾರ್ ಜಾದವ್ ರದ್ದೇ ಹವಾ. ಈ ಯುವ ಕ್ರಿಕೆಟಿಗನಿಗೆ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ತಕ್ಕ ಬಿರುದು ನೀಡಿ ಹೊಗಳಿದ್ದಾರೆ. ಅದೇನದು?  ಈ ಸ್ಟೋರಿ ನೋಡಿ.
 

ಕೋಲ್ಕೊತ್ತಾದಲ್ಲೂ ಜಾದವ್ ಭರ್ಜರಿ ಬ್ಯಾಟಿಂಗ್ ನೋಡಿ ಗವಾಸ್ಕರ್ “ಭಾರತಕ್ಕೊಬ್ಬ ಬೆಸ್ಟ್ ಫಿನಿಶರ್ ಸಿಕ್ಕಿದ್ದಾನೆ. ಆರನೇ ಕ್ರಮಾಂಕಕ್ಕೆ ಸೂಕ್ತ ವ್ಯಕ್ತಿ ಆತ. ನನ್ನ ಪ್ರಕಾರ ಭಾರತಕ್ಕೊಬ್ಬ ಅಮೂಲ್ಯ ರತ್ನ ಸಿಕ್ಕಿದ್ದಾನೆ” ಎಂದು ಯುವ ಕ್ರಿಕೆಟಿಗನ ಬೆನ್ನು ತಟ್ಟಿದ್ದಾರೆ.

ಆದರೆ ಕೊಹ್ಲಿ ಪಡೆ ಅಂತಿಮ ಕ್ಷಣದಲ್ಲಿ ಬೌಲಿಂಗ್ ಮಾಡುವ ಕಲೆ ಸಿದ್ಧಿಸಿಕೊಳ್ಳಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಅಂತಿಮ ಓವರ್ ಗಳಲ್ಲಿ ಬೌಲಿಂಗ್ ಉತ್ತಮ ಪಡಿಸುವ ಬಗ್ಗೆ ನಾಯಕ ಕೊಹ್ಲಿ ಕೂಡಾ ಉಲ್ಲೇಖಿಸಿದ್ದು, ಇದಕ್ಕೆ ಮುಂಬರುವ ಟಿ-ಟ್ವೆಂಟಿ ಪಂದ್ಯಗಳು ವೇದಿಕೆಯಾಗಬಹುದುದು ಎಂಬ ವಿಶ್ವಾಸದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ