ಲಂಡನ್ ವಿಮಾನ ಹತ್ತುವ ಮೊದಲು ರವಿ ಶಾಸ್ತ್ರಿಯೇ ಬೇಕು ಎಂದು ಪಟ್ಟು ಹಿಡಿದಿದ್ದ ವಿರಾಟ್ ಕೊಹ್ಲಿ!

ಗುರುವಾರ, 8 ಜೂನ್ 2017 (08:39 IST)
ಮುಂಬೈ: ಭಾರತ ತಂಡದ ಕೋಚ್ ಹುದ್ದೆ ಎನ್ನುವುದು ಇದೀಗ ದೇಶದ ಅತ್ಯಂತ ಹಾಟ್ ಸೀಟ್ ಆಗಿ ಪರಿವರ್ತನೆಯಾಗಿದೆ. ಘಟಾನುಘಟಿಗಳ ನಡುವೆ ಸ್ಪರ್ದೆ ಏರ್ಪಟ್ಟಿದೆ.

 
ವೀರೇಂದ್ರ ಸೆಹ್ವಾಗ್, ಅನಿಲ್ ಕುಂಬ್ಳೆ, ಟಾಮ್ ಮೂಡಿ ನಡುವೆ ಬಿರುಸಿನ ಪೈಪೋಟಿ ಒಂದೆಡೆ ಇದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಮನಸ್ಸು ಬೇರೆಯವರ ಕಡೆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಚಾಂಪಿಯನ್ಸ್ ಟ್ರೋಫಿಗಾಗಿ ಲಂಡನ್ ವಿಮಾನ ಏರುವ ಮೊದಲು ಬಿಸಿಸಿಐ ಕೋಚ್ ಆಯ್ಕೆ ಸಮಿತಿಯ ಸದಸ್ಯರಾದ ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಬಳಿ ರವಿ ಶಾಸ್ತ್ರಿ ಆಯ್ಕೆ ಪರಿಗಣಿಸುವಂತೆ ಕೊಹ್ಲಿ ಪಟ್ಟು ಹಿಡಿದಿದ್ದಾರೆನ್ನುವುದು ಬೆಳಕಿಗೆ ಬಂದಿದೆ.

ಮೊದಲಿನಿಂದಲೂ ಶಾಸ್ತ್ರಿ ಪರ ನಿಲುವು ಹೊಂದಿರುವ ಕೊಹ್ಲಿ ಇದೀಗ ಸ್ವತಃ ರವಿ ಶಾಸ್ತ್ರಿಗೇ ಇಷ್ಟವಿಲ್ಲದಿದ್ದರೂ, ಅವರನ್ನು ಸ್ಪರ್ದೆಗೆ ಪರಿಗಣಿಸುವಂತೆ ಕೋರಿದ್ದಾರಂತೆ. ಆದರೆ ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಹಾಕಿಲ್ಲ. ಹಾಗಾಗಿ ಅವರನ್ನು ಸ್ಪರ್ಧೆಗೆ ಪರಿಗಣಿಸುತ್ತದೋ ಎಂದು ಕಾದು ನೋಡಬೇಕು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ