ಊಟ ಮಾಡಿ ಬಾ ಎಂದ ಅಂಪಾಯರ್ ರೆಸ್ಟೋರೆಂಟ್ ಪ್ರಚಾರಕ್ಕಿಳಿದ ವಿರಾಟ್ ಕೊಹ್ಲಿ!

ಗುರುವಾರ, 8 ಫೆಬ್ರವರಿ 2018 (08:31 IST)
ನವದೆಹಲಿ: ದ್ವಿತೀಯ ಏಕದಿನ ಪಂದ್ಯದಲ್ಲಿ ಗೆಲುವಿಗೆ 2 ರನ್ ಇದ್ದಾಗ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ರನ್ನು ಪೆವಿಲಿಯನ್ ಗೆ ಕಳುಹಿಸಿದ್ದು ಎಲ್ಲರ ನಗೆಪಾಟಲಿಗೀಡಾಗಿತ್ತು.
 

ಈಗ ಅದೇ ಅಂಪಾಯರ್ ಪಾಕಿಸ್ತಾನದ ಅಲೀಂ ದಾರ್ ಒಡೆತನದ ರೆಸ್ಟೋರೆಂಟ್ ಗೆ ಪ್ರಚಾರ ಮಾಡಲು ಕೊಹ್ಲಿ ಹೊರಟಿದ್ದಾರೆ! ಅಲೀಂ ದಾರ್ ಲಾಹೋರ್ ನಲ್ಲಿ ರೆಸ್ಟೋರೆಂಟ್ ಒಂದನ್ನು ಆರಂಭಿಸಲಿದ್ದಾರೆ.

ಈ ರೆಸ್ಟೋರೆಂಟ್ ನಿಂದ ಬಂದ ಹಣವನ್ನು ದಾರ್ ವಿಕಲಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲಿದ್ದಾರೆ. ಈ ಒಳ್ಳೆಯ ಉದ್ದೇಶಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಹ್ಲಿ ಅವರ ರೆಸ್ಟೋರೆಂಟ್ ಬಗ್ಗೆ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ