ನಿಷೇಧದ ಭೀತಿಯಲ್ಲಿ ನಾಯಕ ವಿರಾಟ್ ಕೊಹ್ಲಿ: ಜಾವಗಲ್ ಶ್ರೀನಾಥ್ ಕೈಯಲ್ಲಿದೆ ಕೊಹ್ಲಿ ಭವಿಷ್ಯ!

ಗುರುವಾರ, 18 ಫೆಬ್ರವರಿ 2021 (09:18 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಅಂಪಾಯರ್ ಜೊತೆ ವಾಗ್ವಾದ ನಡೆಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ನಿಷೇಧದ ಭೀತಿಯಲ್ಲಿದ್ದಾರೆ.


ಜೋ ರೂಟ್ ಗೆ ನೀಡಿದ ವಿವಾದಾತ್ಮಕ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಕೊಹ್ಲಿ ಅಂಪಾಯರ್ ಜೊತೆ ಮೈದಾನದಲ್ಲಿ ವಾಗ್ವಾದ ನಡೆಸಿದ್ದರು. ಈ ಪ್ರಕರಣವನ್ನು ವಿಚಾರಣೆಗೊಳಪಡಿಸಲಿರುವ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್, ಗರಿಷ್ಠ ದಂಡನೆ ನೀಡುವ ತೀರ್ಮಾನಕ್ಕೆ ಬಂದರೆ ಕೊಹ್ಲಿ ಒಂದು ಪಂದ್ಯದ ನಿಷೇಧಕ್ಕೊಳಗಾಗಬೇಕಾಗುತ್ತದೆ. ಹೀಗಾಗಿ ಈಗ ಕೊಹ್ಲಿ ಭವಿಷ್ಯ ಜಾವಗಲ್ ಶ್ರೀನಾಥ್ ಕೈಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ