ಬೆಂಗಳೂರಿನಲ್ಲಿ ರೋಹಿತ್ ಶರ್ಮಾರನ್ನು ಆಡಿಸದೇ ಇದ್ದಿದ್ದು ಯಾಕೆ? ಕಾರಣ ನೀಡಿದ ವಿರಾಟ್ ಕೊಹ್ಲಿ

ಗುರುವಾರ, 28 ಫೆಬ್ರವರಿ 2019 (10:39 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸ್ಟಾರ್ ಆರಂಭಿಕ ರೋಹಿತ್ ಶರ್ಮಾರನ್ನು ಕಣಕ್ಕಿಳಿಸಿರಲಿಲ್ಲ.


ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾರನ್ನು ಹೊರಗಿಟ್ಟಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಆದರೆ ಇದರ ಬಗ್ಗೆ ಕೊಹ್ಲಿ ಆರಂಭದಲ್ಲಿಯೇ ಸಮಜಾಯಿಷಿ ನೀಡಿದ್ದಾರೆ.

‘ರೋಹಿತ್ ತುಂಬಾ ಸಮಯದಿಂದ ಕ್ರಿಕೆಟ್ ಆಡಿ ಬಳಲಿದ್ದಾರೆ. ಅವರಿಗೆ ಸ್ವಲ್ಪ ವಿಶ್ರಾಂತಿ ನೀಡೋಣವೆಂದು ಈ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸುತ್ತಿಲ್ಲ’ ಎಂದು ಕೊಹ್ಲಿ ಹೇಳಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಅನುಭವಿ ಮತ್ತು ಹೊಡೆಬಡಿಯ ಆಟಗಾರನನ್ನು ಕಣಕ್ಕಿಳಿಸದೇ ಇದ್ದಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ