ಚೆಂಡು ತಗುಲಿದ ಕ್ಯಾಮರಾಮೆನ್ ಮೇಲೆ ಮಾನವೀಯತೆ ಪ್ರದರ್ಶಿಸಿದ ನಾಯಕ ಕೊಹ್ಲಿ

ಬುಧವಾರ, 15 ನವೆಂಬರ್ 2017 (08:57 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ಅಭ್ಯಾಸ ಜೋರಾಗಿ ನಡೆದಿದೆ. ಈ ಅಭ್ಯಾಸದ ನಡುವೆ ಗಾಯಗೊಂಡ ಕ್ಯಾಮರಾ ಮೆನ್ ಮೇಲೆ ನಾಯಕ ಕೊಹ್ಲಿ ಕರುಣೆ ತೋರಿದ ಪ್ರಸಂಗವೂ ನಡೆದಿದೆ.

 
ಮೊಹಮ್ಮದ್ ಶಮಿ ಬೌಲಿಂಗ್  ನಲ್ಲಿ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಬಾಲ್ ಮಿಸ್ ಆಗಿ ಟಿವಿ ವಾಹಿನಿಯ ಕ್ಯಾಮರಾಮೆನ್ ಒಬ್ಬರ ಹಣೆಗೆ ಚೆಂಡು ಬಡಿದಿದೆ.

ತಕ್ಷಣ ಅಭ್ಯಾಸ ನಿಲ್ಲಿಸಿ ಕ್ಯಾಮರಾ ಮೆನ್ ಕಡೆಗೆ ಧಾವಿಸಿದ ಕೊಹ್ಲಿ ಟೀಂ ಇಂಡಿಯಾ ದೈಹಿಕ ತರಬೇತುದಾರನನ್ನು ಕರೆಸಿ ತಕ್ಷಣ ಚಿಕಿತ್ಸೆ ಕೊಡಿಸಿದ್ದಾರೆ. ಕ್ಯಾಮರಾಮೆನ್ ಚೇತರಿಸಿಕೊಂಡ ನಂತರವಷ್ಟೇ ಕೊಹ್ಲಿ ಮರಳಿ ಅಭ್ಯಾಸಕ್ಕೆ ತೆರಳಿದರು. ಕೊಹ್ಲಿಯ ನಡೆ ಅಲ್ಲಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ