ಹೈನೋದ್ಯಮಕ್ಕೆ ಆದ್ಯತೆ: ಬಿಎಸ್‌ವೈ

ಶನಿವಾರ, 17 ಮೇ 2008 (19:12 IST)
ರೈತರ ಆತ್ಮಹತ್ಯೆ ತಡೆಗೆ ವಿಶೇಷ ಯೋಜನೆ ರೂಪಿಸುವುದೇ ಬಿಜೆಪಿ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ 30 ಸಾವಿರ ರೂ. ಮರಮಾನವಿರುವವರನ್ನು ಬಡತನ ರೇಖೆಗಿಂತ ಕೆಳಗಿರುವವರೆಂದು ಗುರುತಿಸಲಾಗುವುದು ಎಂಬ ತಿಳಿಸಿದರು.

ಅಲ್ಲದೆ, ಗುಜರಾತ್‌ನಂತೆ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಿನ ಒತ್ತು ನೀಡಲಾಗುವುದು. ಮುಂದಿನ ಐದು ವರ್ಷದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿ ನಿರ್ಮಾಣ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಶಿಕಾರಿಪುರದಲ್ಲಿ 35 ಸಾವಿರ ಮತಗಳಿಂದ ಗೆಲುವು ಪಡೆಯುವುದಾಗಿ ತಿಳಿಸಿದ ಅವರು, ಸೊರಬದಲ್ಲಿ ಬಂಗಾರಪ್ಪನವರ ಇಬ್ಬರೂ ಪುತ್ರರು ಸೋಲನ್ನು ಅನುಭವಿಸುವುದು ಖಚಿತ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ