ಐಟಿಯವರಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ ಎಂದೋರು ಯಾರು?

ಭಾನುವಾರ, 14 ಏಪ್ರಿಲ್ 2019 (15:41 IST)
ಪ್ರಧಾನಿ ನರೇಂದ್ರ ಮೋದಿಯವರ ಕಾಪ್ಟರ್ ನಲ್ಲಿ ಬಾಕ್ಸ್ ಹೇಗೆ ಬಂತು? ಆ ಬಾಕ್ಸ್ ಏನು? ಯಾರದ್ದು ಅನ್ನೋದನ್ನ ಹೇಳಲಿ ಅಂತ ಕೆಪಿಸಿಸಿ ಅಧ್ಯಕ್ಷ ಆಗ್ರಹ ಮಾಡಿದ್ದಾರೆ.

ಎಲ್ಲಾ ಕಡೆ ಬಾಕ್ಸ್ ಯಾಕೆ ಮೋದಿ ಕೊಂಡೊಯ್ತಾರೆ? ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತಾಕತ್ತಿದ್ದರೆ ಐಟಿಯವರು ಇದನ್ನ ತನಿಖೆ ಮಾಡಲಿ ಅಂತ ಸವಾಲು ಹಾಕಿದ್ದಾರೆ.

ಐಟಿಯವರಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಆ ಬಾಕ್ಸ್ ನಲ್ಲಿ ಏನಿದೆ ಅನ್ನೋದು ಅನುಮಾನವಿದೆ. ಪ್ರಧಾನಿಯವರೇ ಇದರ ಬಗ್ಗೆ ಸ್ಪಷ್ಟನೆ ನೀಡಲಿ ಅಂತ ಒತ್ತಾಯ ಮಾಡಿದ್ರು.

ಆ ಬಾಕ್ಸ್, ಗಾಡಿಯ ಬಗ್ಗೆಯೂ ತನಿಖೆ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ಇದರ ಬಗ್ಗೆ ಮೊದಲು ಹೇಳಬೇಕೆಂದು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ