ಗಣೇಶ ಮತ್ತು ವಿಷ್ಣುವಿನ ಶಂಖ

ಒಂದು ದಿನ ವಿಷ್ಣುವಿಗೆ ತನ್ನ ಶಂಖ ಕಳೆದಿದೆ ಎನ್ನುವುದು ಗಮನಕ್ಕೆ ಬಂದಿತು. ಇದರಿಂದ ವಿಷ್ಣು ವ್ಯಗ್ರನಾದ. ಕೆಲ ದಿನಗಳ ನಂತರ ಕೈಲಾಸ ಪರ್ವತದಿಂದ ಶಬ್ದವೊಂದು ಕೇಳಿಬರುತ್ತಿತ್ತು. ಆ ಶಬ್ದ ತನ್ನದೇ ಶಂಖವಾದ್ಯದ್ದು ಎನ್ನುವುದು ವಿಷ್ಣುವಿಗೆ ಖಚಿತವಾಯಿತು. ಮನದಲ್ಲಿ ಶಿವನನ್ನು ನೆನೆದಾಗ ಶಿವನು ಪ್ರತ್ಯಕ್ಷನಾದನು. ನಿನ್ನ ಪ್ರಿಯ ಶಂಖ ನಿನಗೆ ಮರಳಿ ಬೇಕಾದಲ್ಲಿ ಬಲಮುರಿ ಗಣೇಶನನ್ನು ಪ್ರಾರ್ಥಿಸುವಂತೆ ಹೇಳಿ ಮಾಯವಾದನು.

ಅದರಂತೆ ವಿಷ್ಣು ಬಲಮುರಿ ಗಣೇಶನನ್ನು ಭಕ್ತಿಪೂರ್ವಕವಾಗಿ ಪೂಜಿಸಿದಾಗ ಗಣೇಶನು ವಿಷ್ಣುವಿಗೆ ಶಂಖವನ್ನು ಮರಳಿಸಿದ. ಇದರಿಂದ ಭಗವಾನ್ ವಿಷ್ಣು ಸಂತುಷ್ಟಗೊಂಡನು.

ವೆಬ್ದುನಿಯಾವನ್ನು ಓದಿ