ಆದಿ ಪೂಜಿತ ವಿಘ್ನ ನಿವಾರಕ ವಿಘ್ನೇಶ

WD
ವಿಘ್ನ ನಿವಾರಕ ವಿಘ್ನೇಶನಿಗೆ ಯಾವತ್ತೂ ಪ್ರಥಮ ಪೂಜೆ. ಅದಕ್ಕಾಗೆ ಗಣಪತಿಯನ್ನು ಪ್ರಥಮ ಪೂಜಿತ ಎಂದೂ ವರ್ಣಿಸಲಾಗುತ್ತದೆ. ಯುದ್ಧ ಇಲ್ಲವೇ ಶಾಂತಿ ಅಥವಾ ದೈನಂದಿನ ವ್ಯವಹಾರ ಯಾವುದೇ ಇರಲಿ, ಗಣೇಶನನ್ನು ಪೂಜಿಸದೆ ಇದು ಯಶಸ್ವಿಯಾಗುವುದಿಲ್ಲ ಎಂಬುದು ನಂಬುಗೆ.

ಮಾನವ ಮಾತ್ರವಲ್ಲದೆ ಅಲೌಕಿಕ ಜೀವಿಗಳಿಗೂ ಇದು ಸತ್ಯ. ಗಣೇಶ ಪ್ರಥಮ ಪೂಜಿತನಾದ ಬಗೆಯನ್ನು ತಿಳಿಯಬೇಕಾದರೆ ಈ ಕತೆಯನ್ನು ಓದಿ.

ತನ್ನ ಮನದಿಂದ ಗಣೇಶ ಉದಿಸಿದ ಈತ ಪ್ರಥಮ ಪೂಜಿತನೆಂದು ಶಿವ ನಿರ್ಧರಿಸಿದ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದರಿಂದ ಫಲದೊರಕದು ಎಂದೂ ಆತ ಸಂಕಲ್ಪಿಸಿದ.

ಇದಾದ ನಂತರ, ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ.

ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದನು. ನಂತರ, ಮಗನನ್ನು ಪೂಜಿಸಿದ ಮತ್ತು ಯಶಸ್ವಿಯಾಗಿ ತ್ರಿಪುರಾಂತಕ ಯದ್ಧವನ್ನು ಯಶಸ್ವಿಯಾಗಿ ಜಯಿಸಿದನು.

ವೆಬ್ದುನಿಯಾವನ್ನು ಓದಿ