ಈರುಳ್ಳಿಗೆ ಇದನ್ನು ಬೆರೆಸಿ ತಿಂದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು

ಶುಕ್ರವಾರ, 8 ಜನವರಿ 2021 (10:42 IST)
ಬೆಂಗಳೂರು : ಈರುಳ್ಳಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ಈ ರೀತಿಯಲ್ಲಿ ಬಳಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

*1 ಚಮಚ ಈರುಳ್ಳಿ ರಸಕ್ಕೆ  1 ಚಮಚ ಬೆಲ್ಲ ಅಥವಾ ಜೇನುತುಪ್ಪ ಸೇವಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.

*ಈರುಳ್ಳಿ ರಸಕ್ಕೆ ಒಂದು ಚಿಟಿಕೆ ಅರಶಿನ, 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ತಲೆನೋವು ಗುಣವಾಗುತ್ತದೆ.

*ಈರುಳ್ಳಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಊಟದ ಬಳಿಕ ಕುಡಿದರೆ ಅಥವಾ ಈರುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿಂದರೆ ಮೂಲವ್ಯಾಧಿ ವಾಸಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ