ಭಾರತ-ಚೀನಾ ಕಾಳಗ: ಛಿದ್ರವಾಗಿರುವ ಭಾರತದ ವೀರಯೋಧರ ಮೃತದೇಹಗಳು!

ಗುರುವಾರ, 18 ಜೂನ್ 2020 (11:03 IST)
ನವದೆಹಲಿ: ಗಲ್ವಾನ್ ವ್ಯಾಲಿಯಲ್ಲಿ ಚೀನಾ ಸೇನೆಯೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ವೀರ ಯೋಧರ ಮೃತದೇಹಗಳು ಛಿದ್ರವಾದ ಸ್ಥಿತಿಯಲ್ಲಿದೆ. ಇದು ಭಾರತೀಯ ಸೈನಿಕರ ಆಕ್ರೋಶ ಮತ್ತಷ್ಟು ಹೆಚ್ಚುವಂತೆ ಮಾಡಿದೆ.


ವಿರೋಧಿ ಪಡೆಗಳು ನಮ್ಮ ಸೈನಿಕರನ್ನು ಈ ರೀತಿ ಚಿತ್ರಹಿಂಸೆ ಕೊಟ್ಟು ಕೊಂದಿರುವುದು ಭಾರತೀಯ ಸೇನೆಯ ರಕ್ತ ಕುದಿಯುವಂತೆ ಮಾಡಿದೆ. ಹೀಗಾಗಿ ಗಡಿಯಲ್ಲಿ ಈಗ ಆಕ್ರೋಶ ಮೇರೆ ಮೀರಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ