ಐಪಿಎಲ್: ಆರ್ ಸಿಬಿ ಪಾಳಯದಲ್ಲಿ ವಿರಾಟ್ ಕೊಹ್ಲಿ ಪ್ರತ್ಯಕ್ಷ!

ಮಂಗಳವಾರ, 4 ಏಪ್ರಿಲ್ 2017 (08:13 IST)
ಬೆಂಗಳೂರು: ಭುಜದ ಗಾಯದಿಂದಾಗಿ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನ ಆರಂಭಿಕ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಘೋಷಿಸಿಕೊಂಡಿದ್ದರು. ಆದರೂ ಆರ್ ಸಿಬಿ ಪಾಳಯದಲ್ಲಿ ಪ್ರತ್ಯಕ್ಷರಾಗಿದ್ದಾರೆ.

 

ತಂಡ ಅಭ್ಯಾಸ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಕೊಹ್ಲಿ ಖಾಸಾ ಗೆಳೆಯ ಕ್ರಿಸ್ ಗೇಲ್ ಗೆ ತಮ್ಮದೇ ಶೈಲಿಯಲ್ಲಿ ಸ್ವಾಗತ ಕೋರಿದರು. ಅಲ್ಲದೆ ಅಲ್ಲಿದ್ದ ತಂಡದ ಸದಸ್ಯರೊಂದಿಗೆ ಕೆಲ ಹೊತ್ತ ಕಳೆದರು.

 
ಕೊಹ್ಲಿ ಬರುವವರೆಗೆ ತಂಡದ ನಾಯಕತ್ವವನ್ನು ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ ವಹಿಸಿಕೊಳ್ಳಲಿದ್ದಾರೆ. ಬೆಂಗಳೂರು ತಂಡ ಕೊಹ್ಲಿಯಲ್ಲದೆ ಕೆಎಲ್ ರಾಹುಲ್ ಸೇವೆಯಿಂದಲೂ ವಂಚಿತವಾಗಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ