ಶೂನ್ಯಕ್ಕೆ ಔಟಾಗಿದ್ದಕ್ಕೆ ಅಧಿಕಾರಿಗೆ ವಿರಾಟ್ ಕೊಹ್ಲಿ ಬೈಗುಳ

ಸೋಮವಾರ, 24 ಏಪ್ರಿಲ್ 2017 (09:08 IST)
ಬೆಂಗಳೂರು: ನಿನ್ನೆ ನಡೆದ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ದದ ಐಪಿಎಲ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದಕ್ಕೆ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹತಾಶೆಗೊಳಗಾಗಿದ್ದಾರೆ.

 
ಈ ಪಂದ್ಯದಲ್ಲಿ ಕೊಹ್ಲಿ ಶೂನ್ಯ ಸಂಪಾದಿಸಿದ್ದರು. ಇದು ಕೊಹ್ಲಿ ನಿರಾಸೆಯನ್ನು ಮತ್ತಷ್ಟು ಹೆಚ್ಚಿಸಿದೆ. ಔಟಾಗಿ ಪೆವಿಲಿಯನ್ ಗೆ ಮರಳುವಾಗ ಕೋಪದಿಂದ ಬ್ಯಾಟ್ ಕಾಲಿಗೆ ಬಡಿದುಕೊಳ್ಳುತ್ತಾ ಸಾಗಿದ ವಿರಾಟ್ ನಂತರ, ಮ್ಯಾಚ್ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ನಂತರ ಘಟನೆಯ ವಿವರ ನೀಡಿದ ಅವರು, ಸೈಟ್ ಸ್ಕ್ರೀನ್ ತುಂಬಾ ಚಿಕ್ಕದಾಗಿತ್ತು. ಸಾಲದ್ದಕ್ಕೆ, ತಾವು ಔಟಾದ ಎಸೆತ ಎದುರಿಸುವ ಸಂದರ್ಭದಲ್ಲೇ ಒಂದು ಮಗು ಥಟ್ಟನೆ ಅಲ್ಲಿ ಕಾಣಿಸಿಕೊಂಡು ಗಮನ ಬೇರೆಡೆ ಸೆಳೆಯುವಂತೆ ಮಾಡಿತು ಎಂದು ಕೊಹ್ಲಿ ಸಿಟ್ಟಗೆ ಕಾರಣವಾಯಿತಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ