ಐಪಿಎಲ್ 13: ಜಡೇಜಾಗೆ ಅಂತಿಮ ಓವರ್ ಕೊಟ್ಟು ತಪ್ಪು ಮಾಡಿದ ಧೋನಿ

ಭಾನುವಾರ, 18 ಅಕ್ಟೋಬರ್ 2020 (09:31 IST)
ದುಬೈ: ಐಪಿಎಲ್ 13 ರಲ್ಲಿ ನಿನ್ನೆಯ ಪಂದ್ಯದಲ್ಲಿ ಸೋಲು ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅಂತಿಮ ಓವರ್ ನ್ನು ರವೀಂದ್ರ ಜಡೇಜಾಗೆ ಕೊಟ್ಟಿದ್ದಕ್ಕೆ ಟೀಕೆ ಅನುಭವಿಸಿದ್ದಾರೆ.


ಅಂತಿಮ ಓವರ್ ನಲ್ಲಿ ಡೆಲ್ಲಿ ಗೆಲುವು ಸಾಧಿಸಿತ್ತು. ಆ ಓವರ್ ನ್ನು ಜಡೇಜಾ ಬದಲಿಗೆ ವೇಗಿಗಳಿಗೆ ನೀಡಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ. ಧೋನಿಯ ಕಳಪೆ ನಿರ್ಧಾರ ಇದಾಗಿತ್ತು. ಇದರಿಂದಲೇ ಚೆನ್ನೈ ಗೆಲ್ಲಬಹುದಾಗಿದ್ದ ಪಂದ್ಯ ಸೋತಿತು ಎಂದು ನೆಟ್ಟಿಗರು ಟೀಕಿಸಿದ್ದಾರೆ. ಆದರೆ ಮತ್ತೆ ಕೆಲವರು ಧೋನಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಜಡೇಜಾ ಬೌಲಿಂಗ್ ಮಾಡಿದ್ದಲ್ಲ, ಕ್ಯಾಚ್ ಬಿಟ್ಟಿದ್ದು ಪಂದ್ಯ ಕಳೆದುಕೊಳ್ಳಲು ಕಾರಣವಾಯಿತು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ