ಆರ್ ಸಿಬಿಯಿಂದ ಕೊಕ್ ಪಡೆದ ಬ್ರೆಂಡನ್ ಮೆಕ್ಕಲಮ್ ವಿರಾಟ್ ಕೊಹ್ಲಿಗೆ ನೀಡಿದ ವಿಶೇಷ ಸಂದೇಶವೇನು ಗೊತ್ತಾ?

ಭಾನುವಾರ, 18 ನವೆಂಬರ್ 2018 (09:19 IST)
ಬೆಂಗಳೂರು: ಕಳೆದ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಪರ ಆಡಿದ್ದ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕ್ಕಲಮ್ ಗೆ ಈ ಬಾರಿ ತಂಡ ಕೊಕ್ ನೀಡಿದೆ.

ಕೆಲವು ಪ್ರಮುಖ ಆಟಗಾರರನ್ನು ಹರಾಜಿಗೆ ಬಿಟ್ಟಿರುವ ಆರ್ ಸಿಬಿ ಅದರಲ್ಲಿ ಬ್ರೆಂಡನ್ ಕೂಡಾ ಒಬ್ಬರು. ಆದರೆ ಆರ್ ಸಿಬಿಯಿಂದ ಹೊರ ಬಂದ ಬಳಿಕ ಬ್ರೆಂಡನ್ ಇದೀಗ ಟ್ವಿಟರ್ ಮೂಲಕ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ವಿಶೇಷ ಸಂದೇಶ ಕಳುಹಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿಗೆ ಧನ್ಯವಾದ ಮತ್ತು ಕಳೆದ ಐಪಿಎಲ್ ನಲ್ಲಿ ಖುಷಿಯ ಕ್ಷಣಗಳನ್ನು ನೀಡಿದ ಇಡೀ ತಂಡಕ್ಕೆ ಧನ್ಯವಾದ. ಮುಂದಿನ ಐಪಿಎಲ್ ಗೆ ಆಲ್ ದಿ ಬೆಸ್ಟ್’ ಎಂದು ಬ್ರೆಂಡನ್ ಸಂದೇಶ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಸಿಬಿ ‘ಧನ್ಯವಾದಗಳು, ನಮ್ಮ ಜತೆ ಆಡಿದ್ದಕ್ಕೆ ಧನ್ಯವಾದಗಳು. ಚಿನ್ನಸ್ವಾಮಿ ಮೈದಾನ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದೆ’ ಎಂದಿದೆ.  ಆರ್ ಸಿಬಿ ಈ ಬಾರಿ ಬ್ರೆಂಡನ್ ಅಲ್ಲದೆ, ಕೋರೆ ಆಂಡರ್ಸನ್, ಕ್ರಿಸ್ ವೋಕ್ ಸೇರಿದಂತೆ ತಾರಾ ಆಟಗಾರರನ್ನು ಕೈ ಬಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ