ಐಪಿಎಲ್ ಹರಾಜು ಟೇಬಲ್ ನಲ್ಲಿ ಗಮನ ಸೆಳೆದ ಕುಬೇರರ ಮಕ್ಕಳು!

ಸೋಮವಾರ, 29 ಜನವರಿ 2018 (08:24 IST)
ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟಿಗರ ಹರಾಜಿನಷ್ಟೇ ಗಮನ ಸೆಳೆದ ಅಂಶವೊಂದಿತ್ತು. ಅದೇನು ಗೊತ್ತಾ?!
 

ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರ ಮೇಲೆ ಎಲ್ಲರ ಗಮನವಿತ್ತು. ಅವರು ಬೇರಾರೂ ಅಲ್ಲ. ಮುಂಬೈ ಇಂಡಿಯನ್ಸ್ ಮಾಲಿಕ ನೀತಾ ಅಂಬಾನಿ ಪುತ್ರ ಆಕಾಶ್ ಮತ್ತು ಕೆಕೆಆರ್ ಮಾಲಿಕ ಜ್ಯೂಹಿ ಚಾವ್ಲಾ ಪತ್ರಿ ಜಾಹ್ನವಿ.

ಇಬ್ಬರೂ ಕ್ರಿಕೆಟಿಗರ ಹೆಸರು ಕೂಗುವಾಗ ತಮ್ಮ ತಂಡಕ್ಕೆ ಸೂಕ್ತರು ಯಾರೆಂಬ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಯುವಕರೂ ಉತ್ಸಾಹದಿಂದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ