ಈ ಬಾರಿ ಗೆದ್ದೇ ಗೆಲ್ಲುವೆವು ಕಪ್: ಆರ್ ಸಿಬಿ ಬೌಲರ್ ವಿಶ್ವಾಸ

ಬುಧವಾರ, 31 ಮಾರ್ಚ್ 2021 (08:58 IST)
ಚೆನ್ನೈ: ಈ ಬಾರಿ ಕಪ್ ನಮ್ದೇ... ಪ್ರತೀ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀಗೊಂದು ಭರವಸೆಯೊಂದಿಗೇ ಕಣಕ್ಕಿಳಿಯುತ್ತದೆ. ಆದರೆ ಇದುವರೆಗೆ ಆ ಕನಸು ನನಸಾಗಿಲ್ಲ.


ಹಾಗಿದ್ದರೂ ಆರ್ ಸಿಬಿ ಆಟಗಾರರು, ಅಭಿಮಾನಿಗಳು ತಮ್ಮ ತಂಡದ ಮೇಲಿನ ಭರವಸೆ ಕಳೆದುಕೊಳ್ಳಲ್ಲ. ಕಳೆದ ಬಾರಿ ಲೀಗ್ ಹಂತದಲ್ಲಿ ಆರ್ ಸಿಬಿ ಉತ್ತಮ ಆಟವಾಡಿದ್ದರೂ, ಅಂತಿಮ ಹಂತದಲ್ಲಿ ಮುಗ್ಗರಿಸಿತು.

ಆದರೆ ಈ ಬಾರಿ ಹಾಗಾಗಲ್ಲ. ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಆರ್ ಸಿಬಿ ಆಲ್ ರೌಂಡರ್ ಡ್ಯಾನ್ ಕ್ರಿಸ್ಟಿಯಾನ್ ಹೇಳಿದ್ದಾರೆ. ಈ ಬಾರಿ ಆರ್ ಸಿಬಿ ಬ್ಯಾಟಿಂಗ್ ಸಶಕ್ತವಾಗಿದೆ. ಕೊಹ್ಲಿ, ಎಬಿಡಿ ಜೊತೆಗೆ ಗ್ಲೆನ್ ಮ್ಯಾಕ್ಸ್ ವೆಲ್ ಸೇರಿಕೊಂಡಿದ್ದಾರೆ. ನಾವೊಂದು ತಂಡವಾಗಿ ಆಡಿ ಗೆಲ್ಲಲಿದ್ದೇವೆ ಎಂದು ಕ್ರಿಸ್ಟಿಯಾನ್‍ ಹೇಳಿಕೊಂಡಿದ್ದಾರೆ. ಅಭಿಮಾನಿಗಳೂ ಅದೇ ವಿಶ್ವಾಸದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ