ಅಳುತ್ತಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಸಮಾಧಾನಿಸಿದ ವಿರಾಟ್ ಕೊಹ್ಲಿ

ಸೋಮವಾರ, 27 ಸೆಪ್ಟಂಬರ್ 2021 (10:00 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಸೋಲಿನ ಬಳಿಕ ಹತಾಶೆಯಲ್ಲಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಗೆ ಆರ್ ಸಿಬಿ ನಾಯಕ ಇಶಾನ್ ಕಿಶನ್ ಸಮಾಧಾನಿಸಿದ ಘಟನೆ ಮೈದಾನದಲ್ಲಿ ನಡೆದಿದೆ.
Photo Courtesy: Google


ಇಶಾನ್ ಈ ಬಾರಿಯ ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ರನ್ ಮಾಡಿಲ್ಲ. 8 ಇನಿಂಗ್ಸ್ ಗಳಿಂದ ಕೇವಲ 107 ರನ್ ಗಳಿಸಿದ್ದಾರೆ. ಈ ಬ್ಯಾಟಿಂಗ್ ವೈಫಲ್ಯ ಅವರನ್ನು ಕಂಗೆಡಿಸಿದೆ. ಇದೇ ಕಾರಣಕ್ಕೆ ಸೋಲಿನ ಬಳಿಕ ಡಗ್ ಔಟ್ ನಲ್ಲಿ ಅಳುಮುಖ ಮಾಡಿ ಕೂತಿದ್ದರು.

ಅವರತ್ತ ಬಂದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಗಲ ಮೇಲೆ ಕೈ ಹಾಕಿ ಕೆಲವು ಹೊತ್ತು ಸಮಾಧಾನಿಸಿದರು. ಕೆಲವು ಸಲಹೆಗಳನ್ನೂ ನೀಡಿದರು. ರೋಹಿತ್ ಶರ್ಮಾ ಕೂಡಾ ಇಶಾನ್ ರನ್ನು ಪಂದ್ಯದ ಬಳಿಕ ಸಮರ್ಥಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ