ಆಂಜನೇಯ ಮೂರ್ತಿಯನ್ನು ಕೆತ್ತನೆ ಮಾಡಿದ ನಟ ಅರ್ಜುನ್ ಸರ್ಜಾ

ಸೋಮವಾರ, 30 ಏಪ್ರಿಲ್ 2018 (07:26 IST)
ಚೆನ್ನೈ : ತಮ್ಮ ಮನೆಯ ಮುಂಭಾಗದಲ್ಲಿ  ಆಂಜನೇಯ ವಿಗ್ರಹವನ್ನು ಸ್ಥಾಪಿಸಬೇಕು ಎನ್ನುವ ನಟ ಅರ್ಜುನ್ ಸರ್ಜಾ ಅವರು ಕನಸು ಇದೀಗ ನೇರವೇರಿದೆಯಂತೆ.


ಹೌದು. ಚಿಕ್ಕಂದಿನಿಂದಲೂ ಹನುಮಂತನ ದೈವ ಭಕ್ತರಾಗಿರುವ ನಟ ಅರ್ಜುನ್ ಸರ್ಜಾ ಅವರು ಮನೆಯ ಮುಂಭಾಗ ಆಂಜನೇಯ ವಿಗ್ರಹವನ್ನು ಸ್ಥಾಪಿಸಬೇಕು ಎನ್ನುವ ಕನಸನ್ನು ಕಂಡಿದ್ದರಂತೆ. ಇತ್ತೀಚೆಗೆ ಚೆನ್ನೈನಲ್ಲಿರುವ ತಮ್ಮ ಫಾರ್ಮ್ ಹೌಸ್ ಮುಂಭಾಗದಲ್ಲಿ 35ಅಡಿ ಎತ್ತರದ ಧ್ಯಾನದ ರೂಪದಲ್ಲಿ ಕುಳಿತಿರುವ ಅಂಜನೇಯ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ್ದಾರಂತೆ.


ವಿಶೇಷವೆನೆಂದರೆ ಈ ವೇಳೆ ಮೂರ್ತಿಯನ್ನು ಸ್ವತಃ ಅವರೇ ಕೆತ್ತನೆ ಮಾಡಿದ್ದಾರಂತೆ. ಇದನ್ನು ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ  ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ದು, ಅಪ್ಪನ ಕಾರ್ಯದ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ