ಅಭಿಮಾನಿಯ ತೋಟದಲ್ಲಿ ನಡೆಯಲಿದೆ ಹಿರಿಯ ನಟ ರಾಜೇಶ್ ಅಂತ್ಯಸಂಸ್ಕಾರ

ಶನಿವಾರ, 19 ಫೆಬ್ರವರಿ 2022 (16:48 IST)
ಬೆಂಗಳೂರು: ಹಿರಿಯ ನಟ ರಾಜೇಶ್ ಅಂತ್ಯ ಸಂಸ್ಕಾರ ಅವರ ಅಪ್ಪಟ ಅಭಿಮಾನಿಯೊಬ್ಬರ ತೋಟದಲ್ಲಿ ನಡೆಯಲಿದೆ ಎಂದು ಅಳಿಯ ಅರ್ಜುನ್ ಸರ್ಜಾ ಹೇಳಿದ್ದಾರೆ.

ಸಿದ್ಧಲಿಂಗಯ್ಯ ಎಂಬವರ ತೋಟದಲ್ಲಿ ರಾಜೇಶ್ ಅಂತ್ಯ ಸಂಸ್ಕಾರಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರಂತೆ. ಹಲವು ಬಾರಿ ಸಿದ್ದಲಿಂಗಯ್ಯನವರ ಮನೆಗೂ ರಾಜೇಶ್ ಹೋಗಿದ್ದರಂತೆ. ಹೀಗಾಗಿ ಇಲ್ಲಿಯೇ ಅವರ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಸಿದ್ದಲಿಂಗಯ್ಯ ಮನವಿ ಮಾಡಿದ್ದಾರಂತೆ.

ಇದಕ್ಕೂ ಮೊದಲು ಚಿತಾಗಾರದಲ್ಲಿ ರಾಜೇಶ್ ಅಂತ್ಯ ಕ್ರಿಯೆ ನಡೆಸಲು ಕುಟುಂಬ ವರ್ಗ ನಿರ್ಧರಿಸಿತ್ತು. ಆದರೆ ಈಗ ಅಭಿಮಾನಿಯ ತೋಟದ‍ಲ್ಲಿ ನಡೆಸಲು ಕುಟುಂಬ ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ