ಅಂಬರೀಶ್ ಅಭಿಮಾನಿಯ ಈ ನಿರ್ಧಾರ ನೋಡಿ ಕೈ ಎತ್ತಿ ಮುಗಿದ ಸಮುಲತಾ ಅಂಬರೀಶ್!

ಶುಕ್ರವಾರ, 14 ಡಿಸೆಂಬರ್ 2018 (09:25 IST)
ಬೆಂಗಳೂರು: ಇತ್ತೀಚೆಗಷ್ಟೇ ನಿಧನರಾದ ಹಿರಿಯ ನಟ ಅಂಬರೀಶ್ ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂಬರೀಶ್ ನಿಧನದ ನಂತರ ಅದೆಷ್ಟೋ ಜನ ಅವರನ್ನು ತಮ್ಮ ಮನೆಯ ಸದಸ್ಯನ ಕಾರ್ಯ ಮಾಡಿದಂತೆ ಮಾಡಿ ಅಭಿಮಾನ ಮೆರೆದವರಿದ್ದಾರೆ.


ಆದರೆ ಬನ್ನೂರು ಸಮೀಪದ ನಂದೀಶ್ ಎಂಬ ಅಂಬಿ ಕಟ್ಟಾ ಅಭಿಮಾನಿ ಮಾಡಿದ ಕೆಲಸವನ್ನು ಇದೀಗ ಸ್ವತಃ ಸುಮಲತಾ ಅಂಬರೀಶ್ ಕೊಂಡಾಡಿದ್ದಾರೆ.

ಅಂಬರೀಶ್ ಮೇಲೆ ಪ್ರೀತಿಯಿಂದ ನಂದೀಶ್ ಇದೀಗ ತಮ್ಮ ಸಾವಿನ ನಂತರ ತಮ್ಮ ನೆಚ್ಚನ ನಟನ ಸ್ಮರಣಾರ್ಥ ತಮ್ಮ ದೇಹದ ಅಂಗಾಂಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ‘ಇಂತಹ ಪ್ರೀತಿಯ ಬಗ್ಗೆ ಹೇಳಲು ನನಗೆ ಪದಗಳೇ ಬರುತ್ತಿಲ್ಲ. ತುಂಬಾ ಧನ್ಯವಾದ’ ಎಂದು ಸುಮಲತಾ ಟ್ವೀಟ್ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ