ಮಿಲನ ಮೂವೀಗೆ ಅಕ್ಕ ತಂಗಿ ಸೇರಿಸಿದ್ದಾರೆ ಅಷ್ಟೇ..: ಟ್ರೋಲ್ ಆದ ಅಣ್ಣಯ್ಯ ಸೀರಿಯಲ್ ಕತೆ

Krishnaveni K

ಗುರುವಾರ, 17 ಅಕ್ಟೋಬರ್ 2024 (11:00 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರವಾಹಿ ಕತೆ ಈಗ ಮದುವೆವರೆಗೆ ಬಂದು ನಿಂತಿದೆ. ಆದರೆ ಈ ಧಾರವಾಹಿಯಲ್ಲಿ ಈಗ ನಡೆಯುತ್ತಿರುವ ಎಪಿಸೋಡ್ ಗಳನ್ನು ನೋಡಿ ವೀಕ್ಷಕರು ಇದು ಥೇಟ್ ಮಿಲನ ಸಿನಿಮಾ ಕತೆ ಎನ್ನುತ್ತಿದ್ದಾರೆ.

ವಿಕಾಸ್ ಉತ್ತಯ್ಯ, ನಿಶಾ ರವಿಕೃಷ್ಣನ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ ಅಣ್ಣಯ್ಯ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಧಾರವಾಹಿಯಲ್ಲಿ ಈಗ ತನ್ನ ಪ್ರಿಯತಮನ ಹುಡುಕಾಟಕ್ಕಾಗಿ ಅಣ್ಣಯ್ಯನ ಜೊತೆ ನಾಯಕಿ ಪಾರು ಮನೆಯವರು ನಿಶ್ಚಯಿಸಿದ ಮದುವೆಯನ್ನೂ ಬಿಟ್ಟು ಓಡಿ ಹೋಗುತ್ತಾಳೆ. ಆದರೆ ಅವಳ ದುರದೃಷ್ಟಕ್ಕೆ ಅವಳು ಪ್ರೀತಿಸಿದ ಹುಡುಗ ಎಲ್ಲೂ ಕಾಣಿಸುವುದಿಲ್ಲ.

ಕೊನೆಗೆ ಅವಳನ್ನು ಕರೆದುಕೊಂಡು ಹೋಗಿದ್ದ ಅಣ್ಣಯ್ಯ ಅವಳ ಮನ ಒಲಿಸಿ ವಾಪಸ್ ಮದುವೆ ಮನೆಗೆ ಕರೆತರುತ್ತಾನೆ. ಆದರೆ ಮನೆಯವರು ಇವರಿಬ್ಬರೇ ಓಡಿ ಹೋಗಿರುವುದು ಎಂದು ತಪ್ಪು ತಿಳಿದು ಬಲವಂತದಿಂದ ಇಬ್ಬರಿಗೂ ಮದುವೆ ಮಾಡಿಸುತ್ತಾರೆ. ಇದನ್ನು ಅರಿಯದೇ ನಾಯಕನ ತಂಗಿಯಂದಿರು ಮತ್ತು ಹಿರಿಯರು ಸೇರಿಕೊಂಡು ಫಸ್ಟ್ ನೈಟ್ ಕೂಡಾ ಅರೇಂಜ್ ಮಾಡುತ್ತಾರೆ.

ಆದರೆ ಫಸ್ಟ್ ನೈಟ್ ನಲ್ಲಿ ನಾಯಕಿ ಪಾರು ನಾನು ನೀನು ನನಗೆ ಸಹಾಯ ಮಾಡುತ್ತೀಯಾ ಎಂದು ಭರವಸೆ ನೀಡಿ ಮೋಸ ಮಾಡಿದೆ. ನಾನು ಎಂದಿಗೂ ನಿನ್ನವಳಾಗಲು ಸಾಧ್ಯವಿಲ್ಲ. ನಾನು ಎಂದಿಗೂ ನಾನು ಪ್ರೀತಿಸಿದ ಹುಡುಗನಿಗೇ ಸೇರಬೇಕು ಎಂದು ಆಕ್ರೋಶ ಹೊರಹಾಕುತ್ತಾಳೆ. ಆಗ ನಾಯಕ ನಾನು ನಿನ್ನ ಮತ್ತು ನಿನ್ನ ಹುಡುಗನನ್ನು ಒಂದು ಮಾಡುತ್ತೇನೆ ಎಂದು ಪ್ರಾಮಿಸ್ ಮಾಡುತ್ತಾನೆ.

ಈ ಕತೆಯನ್ನು ನೋಡುತ್ತಿದ್ದರೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ಮಿಲನ ಸಿನಿಮಾ ಕತೆಯೇ ನೆನಪಾಗುತ್ತಿದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಮಿಲನ ಸಿನಿಮಾ ಕತೆಗೇ ತಂಗಿಯಂದಿರನ್ನು ಸೇರಿಸಿ ಈ ಸೀರಿಯಲ್ ಕತೆ ಮಾಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ