ನಾನ್ ವೆಜ್ ತಿನ್ನಲ್ಲ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ತುರುಕಿದ್ದ ದರ್ಶನ್

Krishnaveni K

ಶುಕ್ರವಾರ, 14 ಜೂನ್ 2024 (13:26 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ನ ಒಂದೊಂದೇ ಭೀಕರ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಹಲ್ಲೆ ವೇಳೆ ದರ್ಶನ್ ಮತ್ತು ಇತರರು ರೇಣುಕಾಸ್ವಾಮಿ ಮೇಲೆ ಇನ್ನಿಲ್ಲದ ವಿಕೃತಿ ಮೆರೆದಿದ್ದಾರೆ ಎಂಬುದು ತಿಳಿದುಬಂದಿದೆ.

ರೇಣುಕಾಸ್ವಾಮಿಯನ್ನು ಶೆಡ್ ಗೆ ಕರೆದುಕೊಂಡು ಬಂದ ಮೇಲೆ ದರ್ಶನ್ ಚಿಕನ್ ಬಿರಿಯಾನಿ ತಿನಿಸಲು ಯತ್ನಿಸಿದ್ದರು. ಈ ವೇಳೆ ರೇಣುಕಾಸ್ವಾಮಿ ನಾನು ನಾನ್ ವೆಜ್ ತಿನ್ನಲ್ಲ, ಸಸ್ಯಾಹಾರಿ ಎಂದರೂ ದರ್ಶನ್ ಬಿಡದೇ ಚಿಕನ್ ಬಿರಿಯಾನಿ ತಿನಿಸಿದ್ದರು. ಜಾತಿ ಕೆಡಿಸಬೇಡಿ ಎಂದರೂ ಕೇಳದೇ ಚಿಕನ್ ಪೀಸ್ ಬಾಯಿಗಿಟ್ಟರು ಎನ್ನಲಾಗಿದೆ.

ಚಿಕನ್ ಬಿರಿಯಾನಿ ಬಲವಂತವಾಗಿ ಬಾಯಿಗೆ ತುರುಕಿದ ಬಳಿಕ ಎದೆಗೆ ಜಾಡಿಸಿ ಒದ್ದಿದ್ದಾರೆ. ಅಲ್ಲದೆ, ದೊಣ್ಣೆಯಿಂದ ಹೊಡೆದು ಎಚ್ಚರಿಕೆ ಕೊಟ್ಟು ಅಲ್ಲಿಂದ ತೆರಳಿದ್ದಾರೆ. ಒಂದು ಗಂಟೆ ಬಳಿಕ ಆಪ್ತರು ದರ್ಶನ್ ಗೆ ಕರೆ ಮಾಡಿದ್ದು ಆತ ಸಾವನ್ನಪ್ಪಿದ್ದಾನೆ ಎಂಬ ವಿಚಾರ ತಿಳಿಸಿದ್ದಾರೆ.

ಈ ವೇಳೆ ಗಾಬರಿಯಾದ ದರ್ಶನ್ ಮತ್ತೆ ಶೆಡ್ ಗೆ ಬಂದಿದ್ದಾರೆ. ಈ ಕ್ಷಣದ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿತ್ತು. ಪೊಲೀಸ್ ವಿಚಾರಣೆ ವೇಳೆ ದರ್ಶನ್ ತಾನು ದೊಣ್ಣೆಯಿಂದ ಹೊಡೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸ್ಥಳ ಮಹಜರು ವೇಳೆ ಪೊಲೀಸರು ಈ ದೊಣ್ಣೆಯನ್ನು ವಶಪಡಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ