ಮೊನ್ನೆಯವರೆಗೂ ಸುಮಲತಾ ಪರವಾಗಿಯೇ ಇದ್ದೆ: ಚುನಾವಣಾ ಪ್ರಚಾರದ ಬಗ್ಗೆ ನಟ ದರ್ಶನ್ ಹೇಳಿಕೆ

Krishnaveni K

ಭಾನುವಾರ, 10 ಮಾರ್ಚ್ 2024 (12:21 IST)
ಬೆಂಗಳೂರು: ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯಲು ಸಜ್ಜಾಗಿರುವ ಸುಮಲತಾ ಅಂಬರೀಶ್ ಗೆ ನಟ ದರ್ಶನ್ ಸಾಥ್ ನೀಡಲಿದ್ದಾರೆ. ಈ ಬಾರಿಯೂ ಸುಮಲತಾ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸುಮಲತಾ ಅಂಬರೀಶ್ ತಯಾರಿ ನಡೆಸುತ್ತಿದ್ದಾರೆ. ಆದರೆ ಮಂಡ್ಯ ಟಿಕೆಟ್ ಗೆ ಮೈತ್ರಿ ಪಕ್ಷ ಜೆಡಿಎಸ್ ಕೂಡಾ ಬೇಡಿಕೆಯಿಟ್ಟಿದೆ. ಹೀಗಾಗಿ ಇನ್ನೂ ಬಿಜೆಪಿ ನಾಯಕರು ಮಂಡ್ಯ ಟಿಕೆಟ್ ಸುಮಲತಾಗೆ ಕೊಡುವ ಬಗ್ಗೆ ತೀರ್ಮಾನಕ್ಕೆ ಬಂದಿಲ್ಲ.

ಆದರೆ ಸುಮಲತಾ ಮಾತ್ರ ಇನ್ನೊಂದು ವಾರ ಕಾಯಿರಿ. ನಿಮಗೇ ಗೊತ್ತಾಗುತ್ತದೆ. ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಲಿದ್ದೇನೆ ಎಂದು ವಿಶ್ವಾಸದಿಂದಲೇ ಹೆಳುತ್ತಿದ್ದಾರೆ. ಈ ನಡುವೆ ಕಳೆದ ಬಾರಿಯಂತೆ ಈ ಬಾರಿಯೂ ದರ್ಶನ್-ಯಶ್ ಪ್ರಚಾರಕ್ಕೆ ಬರುವ ಬಗ್ಗೆಯೂ ಮಾತನಾಡಿದ್ದರು. ಆದರೆ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಇರುವ ಕಾರಣ ರಾಜಕೀಯದಿಂದ ದೂರವುಳಿಯುವುದಾಗಿ ಹೇಳಿದ್ದರು.

ಆದರೆ ದರ್ಶನ್ ಮಾತ್ರ ಸುಮಮ್ಮನ ಪರವಾಗಿ ಪ್ರಚಾರ ಮಾಡುವುದಾಗಿ ಖಚಿತಪಡಿಸಿದ್ದಾರೆ. ‘ಮೊನ್ನೆಯವರೆಗೂ ಸುಮಲತಾ ಪರವಾಗಿ ಇದ್ದೆ. ಈಗ ಅಮ್ಮನ ಕೈಬಿಡಕ್ಕಾಗುತ್ತಾ?’ ಎಂದು ಪ್ರಶ್ನಿಸಿದ್ದಾರೆ.  ಆ ಮೂಲಕ ಈ ಬಾರಿಯೂ ಸುಮಲತಾ ಪರವಾಗಿ ಪ್ರಚಾರಕ್ಕಿಳಿಯುವುದು ಖಚಿತ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ