ಕಲ್ಜಿಗ ಸಿನಿಮಾ ತಂಡದ ವಿರುದ್ಧ ಠಾಣೆ ಮೆಟ್ಟಿಲೇರಿದ ದೈವ ನರ್ತಕರು

Sampriya

ಮಂಗಳವಾರ, 24 ಸೆಪ್ಟಂಬರ್ 2024 (15:41 IST)
Photo Courtesy X
ಮಂಗಳೂರು:  ಕನ್ನಡದಲ್ಲಿ ರಿಲೀಸ್ ಆಗಿರುವ ಕರಾವಳಿಯವರ 'ಕಲ್ಜಿಗ' ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬೆನ್ನಲ್ಲೇ ಚಿತ್ರ ತಂಡದ ವಿರುದ್ಧ ದೈವ ನರ್ತಕರು ಠಾಣೆ ಮೆಟ್ಟಿಕೇರಿದ್ದಾರೆ.

ಸಿನಿಮಾದಲ್ಲಿ ಕೊರಗಜ್ಜ ದೈವದ ದೃಶ್ಯಾವಳಿ, ಕೋಲದ ಚಿತ್ರಣವಿದ್ದು, ಇದರ ಬಗ್ಗೆ ದೈವರಾಧಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಾಂತಾರ ಸಿನಿಮಾದ ಬಳಿಕ ಕರಾವಳಿಯ ದೈವ ಇಂದು ಬೀದಿ ಬೀದಿಗಳಲ್ಲಿ ಪ್ರದರ್ಶನಗೊಳ್ಳುವಂತಹ ಮಟ್ಟಕ್ಕೆ ಬಂದು ನಿಂತಿದೆ. ಇದೀಗ ಮತ್ತೇ ದೈವ ವಿಷಯವನ್ನು ಆಧಾರಿಸಿ, ಸಿನಿಮಾ ಮಾಡಲಾಗಿದೆ. ಹೀಗೇ ನಡೆದುಕೊಂಡು ಹೋದಲ್ಲಿ ಇದನ್ನು ನಿಯಂತ್ರಿಸುವುದು ಹೇಗೆ. ಈ ಹಿನ್ನೆಲೆ ಸಿನಿಮಾದಲ್ಲಿರುವ ಕೊರಗಜ್ಜ ದೃಶ್ಯಕ್ಕೆ ಕತ್ತರಿ ಹಾಕುವಂತೆ ಕೇಳಿಕೊಂಡಿದೆ.

ಆದರೆ ಸಿನಿಮಾ ತಂಡ ಮಾತ್ರ ನಾವೆಲ್ಲೂ ದೈವಾರಾಧನೆಯನ್ನು ನಿಂದನೆ ಮಾಡಿಲ್ಲ. ಇದರ ಪರಿಣಾಮ ಕೆಂಡಾಮಂಡಲವಾದ ದೈವಾರಾಧಕರು, ಸಿನಿಮಾದ ವಿರುದ್ಧ ಈಗ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಮೂಲಕ ಕಲ್ಜಿಗ ಸಿನಿಮಾ ತಂಡ ಹಾಗೂ ದೈವಾರಾಧಕರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ