ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ: ದರ್ಶನ್ ಬಗ್ಗೆ ಡಾಲಿ ಧನಂಜಯ ಖಡಕ್ ಹೇಳಿಕೆ

Krishnaveni K

ಗುರುವಾರ, 11 ಜುಲೈ 2024 (11:32 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಬಗ್ಗೆ ಡಾಲಿ ಧನಂಜಯ್ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದಿದ್ದಾರೆ.

ಡಾಲಿ ಧನಂಜಯ್ ಕೂಡಾ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದವರು. ಈ ಹಿಂದೆ ದರ್ಶನ್ ಮತ್ತು ಸ್ನೇಹಿತರು ತಡರಾತ್ರಿವರೆಗೂ ಪಾರ್ಟಿ ಮಾಡಿದ ಪ್ರಕರಣದಲ್ಲಿ ಸಿಲುಕಿಕೊಂಡಾಗ ಆ ಪಾರ್ಟಿಯಲ್ಲಿ ಧನಂಜಯ್ ಕೂಡಾ ಇದ್ದರು. ಅವರೂ ದರ್ಶನ್ ಜೊತೆಗೆ ಪೊಲೀಸರ ಮುಂದೆ ಹಾಜರಾಗಿದ್ದರು.

ಅಷ್ಟು ನಿಕಟವಾಗಿರುವ ದರ್ಶನ್ ಬಗ್ಗೆ ಧನಂಜಯ್ ಒಂದೇ ಒಂದು ಪ್ರತಿಕ್ರಿಯೆ ನೀಡದೇ ಇದ್ದಿದ್ದು ಟೀಕೆಗೆ ಗುರಿಯಾಗಿತ್ತು. ಕೊನೆಗೂ ಈಗ ಅವರು ಮೌನ ಮುರಿದಿದ್ದಾರೆ. ಈ ಹಿಂದೆ ಸಿನಿಮಾ ಕಾರ್ಯಕ್ರಮದಲ್ಲಿ ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದ್ದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ಆದರೆ ಈಗ ಮತ್ತೆ ಮಾಧ್ಯಮಗಳು ಅದೇ ಪ್ರಶ್ನೆ ಮಾಡಿದಾಗ ‘ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ನಡೆದ ಕೃತ್ಯವನ್ನು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಬದುಕು ಮತ್ತೊಂದು ಅವಕಾಶ ಕೊಡುತ್ತದೆ. ದರ್ಶನ್ ಮತ್ತೆ ಹೊಸ ಬದುಕು ಕಟ್ಟಿಕೊಳ್ಳಲಿ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ