‘ಗರುಡ ಗಮನ’ ತಂಡದಿಂದ ಬರಲಿದೆ ಮತ್ತೊಂದು ಮಾಸ್ಟರ್ ಪೀಸ್

ಶನಿವಾರ, 10 ಜೂನ್ 2023 (19:21 IST)
Photo Courtesy: Twitter
ಬೆಂಗಳೂರು: ಗರುಡ ಗಮನ ವೃಷಭ ವಾಹನ ಎಂಬ ಅದ್ಭುತ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದ ಅದೇ ತಂಡದಿಂದ ಮತ್ತೊಂದು ಸಿನಿಮಾ ಹೊರಬರಲಿದೆ.

ಜೂನ್ 13 ರಂದು ಬೆಳಿಗ್ಗೆ 11.07 ಕ್ಕೆ ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಟೀಂ ಘೋಷಣೆ ಮಾಡಿದೆ. ಈ ಪ್ರಾಜೆಕ್ಟ್ ನಲ್ಲೂ ರಾಜ್ ಬಿ ಶೆಟ್ಟಿ ಇರಲಿದ್ದಾರೆ ಎನ್ನುವುದೇ ವಿಶೇಷ.

ಒಂದು ಮೊಟ್ಟೆ ಕತೆ ಸಿನಿಮಾದಿಂದ ಹಿಡಿದು ಇತ್ತೀಚೆಗಿನವರೆಗಿನ ಎಲ್ಲಾ ಸಿನಿಮಾಗಳವರೆಗೂ ರಾಜ್ ಬಿ ಶೆಟ್ಟಿ ಸಿನಿ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ ಬಿ ಶೆಟ್ಟಿ ಇದ್ದರೆ ಸಿನಿಮಾ ವಿಶೇಷವಾಗಿರುತ್ತದೆ ಎಂಬ ನಂಬಿಕೆ ಪ್ರೇಕ್ಷಕರದ್ದು. ಹೀಗಾಗಿ ಈ ಹೊಸ ಸಿನಿಮಾ ಬಗ್ಗೆಯೂ ಕುತೂಹಲ ಮೂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ