ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕೆಲವು ತಿಂಗಳುಗಳ ಕಾಲ ಜೈಲು ಸೇರಿದ್ದಾಗ ಅಭಿಮಾನಿಗಳು ತೀರಾ ದುಃಖದಲ್ಲಿದ್ದರು. ಇನ್ನು, ಅವರು ಬೆನ್ನು ನೋವಿನಿಂದ ಬಳಲುತ್ತಿದ್ದ ಪರಿ ನೋಡಿ ಇನ್ನು ಸದ್ಯಕ್ಕೆ ಅವರ ಕಡೆಯಿಂದ ಸಿನಿಮಾ ಅಪ್ ಡೇಟ್ ಸಿಗದೇನೋ ಎಂಬ ಬೇಸರದಲ್ಲಿದ್ದರು.
ಕಾಟೇರದಂತಹ ಸಕ್ಸಸ್ ಸಿನಿಮಾ ಕೊಟ್ಟ ಬಳಿಕ ದರ್ಶನ್ ನಾಯಕರಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಆದರೆ ಈ ಸಿನಿಮಾ ಚಿತ್ರೀಕರಣ ಹಂತದಲ್ಲಿರುವಾಗಲೇ ದರ್ಶನ್ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದರು. ಈ ಬಾರಿ ಅವರು ಹುಟ್ಟುಹಬ್ಬ ನಿಮ್ಮೊಂದಿಗೆ ಆಚರಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ. ಅದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ ಆ ನಿರಾಸೆ ಮರೆಸಲು ಡೆವಿಲ್ ಟೀಸರ್ ಬರುತ್ತಿದೆ.