ಕೀರ್ತಿ ಸುರೇಶ್ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲಂಸ್: ಕನ್ನಡಿಗರ ತರಾಟೆ

ಸೋಮವಾರ, 5 ಡಿಸೆಂಬರ್ 2022 (09:23 IST)
Photo Courtesy: Twitter
ಬೆಂಗಳೂರು: ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈಗ ತಮಿಳಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದೆ.

ಆದರೆ ಇದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಹೊಂಬಾಳೆ ಫಿಲಂಸ್ ಕೆಜಿಎಫ್ ಸಿನಿಮಾ ಬಳಿಕ ಹಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಿಸಿತ್ತು. ವಿಶೇಷವೆಂದರೆ ಇವೆಲ್ಲವೂ ಪರಭಾಷೆಯದ್ದೇ ಆಗಿದೆ. ಇದಕ್ಕೆ ಮೊದಲು ಮಲಯಾಳಂ ನಟ ಫಹಾದ್ ಫಾಸಿಲ್ ಜೊತೆಗೆ ಧೂಮಂ, ಪೃಥ್ವಿರಾಜ್ ಸುಕುಮಾರನ್ ಅವರ ಟೈಸನ್ ಸಿನಿಮಾ ಘೋಷಣೆ ಮಾಡಿದೆ. ಈಗ ಕೀರ್ತಿ ಸುರೇಶ್ ಜೊತೆಗೆ ‘ರಘು ತಥಾ’ ಎಂಬ ತಮಿಳು ಸಿನಿಮಾ ಘೋಷಣೆ ಮಾಡಿದೆ. ಈ ರೀತಿ ಪರಭಾಷಾ ನಾಯಕರನ್ನೇ ಹಾಕಿಕೊಂಡು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸುತ್ತಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಬೇರೆ ಭಾಷೆಯಲ್ಲೂ ನಮ್ಮ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಸಿನಿಮಾ ನಿರ್ಮಿಸುತ್ತಿರುವುದು ಹೆಮ್ಮೆಯೇ. ಆದರೆ ಪ್ರತೀ ಬಾರಿಯೂ ಪರಭಾಷಿಕರಿಗೇ ಹೊಸ ಸಿನಿಮಾ ಘೋಷಿಸುತ್ತಿರುವುದೇಕೆ? ಕನ್ನಡಿಗರಿಗೆ ಯಾಕಿಲ್ಲ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೊಂಬಾಳೆ ಫಿಲಂಸ್ ಪರಭಾಷೆಯಲ್ಲೂ ಸಿನಿಮಾ ನಿರ್ಮಿಸುತ್ತಿರುವುದು ನಮಗೆ ಹೆಮ್ಮೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ