ವಂದೇ ಮಾತರಂ ಹಾಡಿನಲ್ಲಿ ಯಶ್, ದರ್ಶನ್ ಕಾಣಿಸಿಕೊಳ್ಳದ್ದಕ್ಕೆ ಕಾರಣ ತಿಳಿಸಿದ ಜಗ್ಗೇಶ್

ಸೋಮವಾರ, 15 ಆಗಸ್ಟ್ 2022 (17:14 IST)
ಬೆಂಗಳೂರು: 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ವಂದೇ ಮಾತರಂ’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕನ್ನಡ ಚಿತ್ರರಂಗದ ಅನೇಕ ನಟರು ಕಾಣಿಸಿಕೊಂಡಿದ್ದಾರೆ.

ಆದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ದರ್ಶನ್ ವಿಡಿಯೋದಲ್ಲಿರಲಿಲ್ಲ. ಇದು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದಕ್ಕೆ ಕಾರಣವೇನೆಂದು ಹಾಡಿನ ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದ ನವರಸನಾಯಕ ಜಗ್ಗೇಶ್ ವಿವರಿಸಿದ್ದಾರೆ.

ಕೇವಲ 13 ದಿನಗಳಲ್ಲಿ ಎಲ್ಲರ ಸಂಘಟಿಸಿ ಹಾಡು ಮಾಡಬೇಕಾಯಿತು. ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದ ಜವಾಬ್ಧಾರಿ ತೆಗೆದುಕೊಂಡರು. ದರ್ಶನ್ ಹಾಗೂ ಯಶ್ ವೈಯಕ್ತಿಕ ಕಾರಣವಿದ್ದ ಕಾರಣ ಬರಲಿಲ್ಲ. ಬಂದಿದ್ದರೆ ಪೂರ್ಣತೆ ಆಗುತ್ತಿತ್ತು’ ಎಂದು ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ