ಇಂದು ಶಿಗ್ಗಾವಿಯಲ್ಲಿ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ

ಬುಧವಾರ, 19 ಏಪ್ರಿಲ್ 2023 (09:31 IST)
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಮೇಲಿನ ಅಭಿಮಾನದಿಂದ ನಟ ಕಿಚ್ಚ ಸುದೀಪ್ ಈ ಬಾರಿ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ.

ಅದರ ಮುನ್ನುಡಿಯೆಂಬಂತೆ ಇಂದು ಶಿಗ್ಗಾವಿಯಲ್ಲಿ ಸಿಎಂ ಜೊತೆ ಮೊದಲ ಪ್ರಚಾರ ಮಾಡಲಿದ್ದಾರೆ. ಇಂದು ಸಿಎಂ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಕಿಚ್ಚನೂ ಜೊತೆಯಾಗಲಿದ್ದಾರೆ.

ಬೆಳಿಗ್ಗೆ ರೋಡ್ ಶೋನಲ್ಲಿ ಭಾಗವಹಿಸಲಿರುವ ಸುದೀಪ್ ದಿನವಿಡೀ ಬಿಜೆಪಿ ನಾಯಕರ ಜೊತೆ ಕ್ಷೇತ್ರ ಸಂಚಾರ ಮಾಡಲಿದ್ದಾರೆ. ಕಿಚ್ಚ ವಾಲ್ಮೀಕಿ ಸಮುದಾಯದವರಾಗಿದ್ದು, ಅವರು ಬಂದರೆ ಆ ಸಮುದಾಯದ ಮತ ಬೀಳಬಹುದು ಎಂಬ ನಿರೀಕ್ಷೆ ಬಿಜೆಪಿ ನಾಯಕರದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ