ಆಸಿಡ್ ಸಂತ್ರಸ್ತೆಯ ಆಸೆ ಈಡೇರಿಸಲಿರುವ ಕಿಚ್ಚ ಸುದೀಪ್

ಮಂಗಳವಾರ, 28 ಜೂನ್ 2022 (16:31 IST)
ಬೆಂಗಳೂರು: ಆಸಿಡ್ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಯುವತಿಯ ಕನಸನ್ನು ಕಿಚ್ಚ ಸುದೀಪ್ ನನಸು ಮಾಡಲು ಹೊರಟಿದ್ದಾರೆ.

ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆಸಿಡ್ ದಾಳಿಗೊಳಗಾಗಿದ್ದ ಯುವತಿ ಕಿಚ್ಚ ಸುದೀಪ್ ಅವರ ಅಭಿಮಾನಿಯಂತೆ. ಒಮ್ಮೆ ಸುದೀಪ್ ರನ್ನು ಭೇಟಿ ಮಾಡಬೇಕು ಎಂಬುದು ಆಕೆಯ ಬಯಕೆ. ಈ ವಿಚಾರ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೇ ಸುದೀಪ್ ಅಭಿನಯದ ವಿಕ್ರಾಂತ್ ರೋಣ ನಿರ್ಮಾಪಕ ಜ್ಯಾಕ್ ಮಂಜು ಯುವತಿಯ ಸಹಾಯಕ್ಕೆ ಬಂದಿದ್ದಾರೆ.

ಯುವತಿಯ ಜೊತೆ ಸುದೀಪ್ ವಿಡಿಯೋ ಕಾಲ್ ಮುಖಾಂತರ ಮಾತನಾಡಿಸಲು ವ್ಯವಸ್ಥೆ ಮಾಡುವುದಾಗಿ ಜ್ಯಾಕ್ ಮಂಜು ಹೇಳಿದ್ದಾರೆ. ಅದರಂತೆ ಇಂದು ಸಂಜೆ ಸುದೀಪ್ ಯುವತಿ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಮನೆಗೆ ಕರೆಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ